ವಿಜಯನಗರ:- ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿರಂತರ 30 ಗಂಟೆಗಳ ಕಾಲ ಹನುಮಾನ್ ಚಾಲೀಸ ಪಠಣ ಮಾಡಲಾಗಿದೆ.
ಸಾವಿರಾರು ಸಂಖ್ಯೆಯ ಭಕ್ತಗಣರಿಂದ ಹನುಮಾನ್ ಚಾಲೀಸ ಪಠಣ ಮಾಡಲಾಗಿದ್ದು, ಅಯೋಧ್ಯೆ ರಾಮ ಮಂದಿರ ಮಾದರಿ ದೇಗುಲ ನಿರ್ಮಿಸಿ ನಿರಂತರ ಪಠಣ ಮಾಡಲಾಗಿದೆ. ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜ ಉಪಾಸನ ಮಂಡಳಿ, ಕರ್ನಾಟಕ ಬ್ರಾಹ್ಮಣ ಸಮಾಜದಿಂದ ಸಹಸ್ರ ಕಂಠ ಹನುಮಾನ್ ಚಾಲೀಸ ಪಠಿಸಿದ್ದಾರೆ.
ಚಾಲೀಸ ಪಠಣ ಬಳಿಕ ಶ್ರೀರಾಮ ತಾರಕ ಯಜ್ಞ ಪೂಜೆ ಮಾಡಲಾಗಿದೆ.