ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೂ ನನಗೂ ಯಾವುದೇ ಸಂಭಂಧವಿಲ್ಲ. ಈ ಪ್ರಕರಣದಲ್ಲಿ ದೇವರಾಜೇಗೌಡ ನಕಲಿ ವಕೀಲ, ಅವರ ಮೈಯಲ್ಲಾ ಕ್ಯಾಮೆರಾ ಇದೆ ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದರು. ಪತ್ರಿಕಾಗೋಷ್ಠಿ ನಡೆಸಿದ ಅವರು, ದೇವರಾಜೇಗೌಡ ನನ್ನ ಹೆಸರು ಬಳಕೆ ಮಾಡಿದ್ದು ವಿಷಾದನೀಯ. ಏಪ್ರಿಲ್ 29 ಕ್ಕೆ ದೇವರಾಜೇಗೌಡ ನಾನು ಭೇಟಿಯಾಗಿದ್ದು ಇದೇ ಮೊದಲು. ಅಲ್ಲಿ ತನಕ ಅವರನ್ನು ನಾನು ಈ ಹಿಂದೆ ಯಾವತ್ತೂ ಭೇಟಿಯಾಗಿರಲಿಲ್ಲ ಎಂದರು.
ಈ ವೇಳೆ ಡಿಕೆಶಿ ಭೇಟಿ ಮಾಡಿಸಿ ಎಂದು ನನ್ನಲ್ಲಿ ಪದೇ ಪದೇ ಮನವಿ ಮಾಡಿದ್ದರು. ಹೊಳೆನರಸೀಪುರದವರು ಬಂದು ನಿಮ್ಮನ್ನು ದೇವರಾಜೇಗೌಡ ಕೇಳ್ತಿದ್ದರು ಎಂದರು. ಹಾಗಾಗಿ ಮೊದಲು ಫೋನ್ ನಲ್ಲಿ ನಾನು ದೇವರಾಜೇಗೌಡ ಜೊತೆ ಮಾತನಾಡಿದ್ದೆ. ಆಗ ನನ್ನನ್ನು ಭೇಟಿಯಾಗಬೇಕು ಎಂದರು. ಸರಿ ಬಾ ಇದೇ ಏಟ್ರಿಯಾದಲ್ಲಿ ಇರ್ತಿನಿ ಬಾ ಎಂದೆ. ಆಗ ನಾನು ಡಿಕೆಶಿಗೆ ಫೋನ್ ಮಾಡಿದೆ.
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಅವರು ರಾಣೇಬೆನ್ನೂರಲ್ಲಿ ಎಲ್ಲೋ ಇದ್ದರು. ನಾನು ಬರೋದು ರಾತ್ರಿಯಾಗುತ್ತೆ ಎಂದರು. ಅಮೇಲೆ ನಾನೇ ರಾತ್ರಿ ಡಿಕೆಶಿ ಭೇಟಿಯಾಗಿ ಹಾಸನದ ದೇವರಾಜೇಗೌಡ ನಿಮ್ಮನ್ನು ಭೇಟಿಯಾಗಬೇಕು ಎಂದು ಹೇಳ್ತಿದ್ದೇನೆ ಎಂದರು. ಅದಕ್ಕೆ ಹೇ ಅವನ ಹತ್ತಿರ ಏನು ಅಂತ ಡಿಕೆಶಿ ಹೇಳಿದ್ರು. ನಾನು ನೀವು ಉಪಮುಖ್ಯಮಂತ್ರಿ ನೀವೇ ಹೀಗೆ ಅಂದ್ರೆ ಹೇಗೆ ಎಂದೆ. ಆಗ ನನ್ನ ಮೊಬೈಲ್ನಿಂದಲ್ಲೇ ದೇವರಾಜೇಗೌಡ ಜೊತೆ ಡಿಕೆಶಿ ಮಾತನಾಡಿದ್ರು. ಹೇಗೆ ನಿನ್ನ ಹೋರಾಟ ಎಂದು ಡಿಕೆಶಿ ಕೇಳಿದ್ರು ಎಂದು ವಿವರಿಸಿದರು.