ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಇಬ್ಬರನ್ನೂ ಫ್ರಾಂಚೈಸಿ ಮುಂಬರುವ ಮೆಗಾ ಹರಾಜಿಗೆ ಬಿಟ್ಟುಕೊಡಲಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯ ಕೊನೇ ಸ್ಥಾನ ಪಡೆದಿದೆ. ಐಪಿಎಲ್ 2025 ಟೂರ್ನಿ ಸಲುವಾಗಿ ಇದೇ ವರ್ಷ ಡಿಸೆಂಬರ್ನಲ್ಲಿ ಮೆಗಾ ಆಕ್ಷನ್ ನಡೆಯಲಿದ್ದು, ಮುಂಬೈ ತನ್ನ ಸ್ಟಾರ್ ಆಟಗಾರರನ್ನು ಹರಾಜಿಗೆ ಬಿಟ್ಟುಕೊಡಲಿದೆ ಎಂದೇ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
2021ರ ಐಪಿಎಲ್ ಬಳಿಕ ಮುಂಬೈ ಇಂಡಿಯನ್ಸ್ ತಂಡ ತೊರೆದು ಗುಜರಾತ್ ಟೈಟನ್ಸ್ ಸೇರಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಯಶಸ್ಸು ಕಂಡಿದ್ದರು. ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ಹಾರ್ದಿಕ್, 2023ರ ಆವೃತ್ತಿಯಲ್ಲಿ ರನ್ನರ್ಸ್ಅಪ್ ಸ್ಥಾನ ತಂದುಕೊಟ್ಟರು. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡದ ಭವುಷ್ಯದ ನಾಯಕನನ್ನಾಗಿ ಹಾರ್ದಿಕ್ ಅವರನ್ನು ಮುಂಬೈ ಫ್ರಾಂಚೈಸಿ ಮರಳಿ ಕರೆತಂದಿತ್ತು.
Monsoon: ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಬೇಡಿ..!
“ಒಂದು ವಿಚಾರ ತಿಳಿದುಕೊಳ್ಳಿ, ಆಮಿರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಎಲ್ಲರನ್ನೂ ಸೇರಿಸಿ ಹಿಟ್ ಸಿನೆಮಾ ಮಾಡಲು ಖಂಡಿತಾ ಸಾಧ್ಯವಿಲ್ಲ. ಒಂದು ಉತ್ತಮ ಪ್ರದರ್ಶನಕ್ಕೆ ಉತ್ತಮ ಕಥೆ ಬೇಕಿರುತ್ತದೆ. ಸೂಕ್ತ ಪಾತ್ರಗಳನ್ನು ನಿಭಾಯಿಸುವವರು ಬೇಕಿರುತ್ತದೆ. ಚೆನ್ನೈ ಎದುರು ರೋಹಿತ್ ಶರ್ಮಾ ಶತಕ ಬಾರಿಸಿದರೂ ಮುಂಬೈ ಇಂಡಿಯನ್ಸ್ ಸೋಲುಂಡಿತ್ತಲ್ಲ. ಉಳಿದ ಆಟಗಾರರ ಪ್ರದರ್ಶನಕ್ಕೆ ಏನಾಗಿದೆ?,” ಎಂದು ಕ್ರಿಕ್ಬಝ್ ಕಾರ್ಯಕ್ರಮದಲ್ಲಿ ವೀರೇಂದ್ರ ಸೆಹ್ವಾಗ್ ಮಾತನಾಡಿದ್ದಾರೆ.
“ಈ ಆವೃತ್ತಿಯಲ್ಲಿ ಇಶಾನ್ ಕಿಶನ್ ಎಲ್ಲ ಪಂದ್ಯವನ್ನೂ ಆಡಿದ್ದಾರೆ. ಆದರೆ ಪವರ್ ಪ್ಲೇ ಓವರ್ಗಳನ್ನು ದಾಟಲು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಬಿಟ್ಟು ಬೇರೆ ಯಾರನ್ನೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಉಳಿಸಿಕೊಳ್ಳುವಂತೆ ಕಾಣಿಸುತ್ತಿಲ್ಲ. ಇವರಿಬ್ಬರೇ ಮೊದಲ ಆಯ್ಕೆಯ ಆಟಗಾರರು. ನಂತರದ 2 ಸ್ಥಾನದಲ್ಲಿ ಯಾರು ಬರುತ್ತಾರೆ ಕಾದು ನೋಡಬೇಕು,” ಎಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)