ಚಾಮರಾಜನಗರ: ಅಪ್ಪನಿಗೆ ಶಾಸಕನ ಸ್ಥಾನವೂ ಬೇಕು, ಸಚಿವ ಸ್ಥಾನಬೇಕು ಮಗನಿಗೆ ಸಂಸದನ ಸ್ಥಾನ ಬೇಕಾ ? ಎಲ್ಲವೂ ನಿಮಗೇ ಬೇಕಾ? ಎಂದು ಚಾಮರಾಜನಗರ ಲೋಕಸಭಾ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ಭಾಗದ ರೋಡ್ ಶೋನಲ್ಲಿ ಮಾತನಾಡಿದ ಅವರು, ದಲಿತರು ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಸಚಿವ ಹೆಚ್.ಸಿ. ಮಹದೇವಪ್ಪ ದಲಿತರಿಗೆ ಏನ್ ಮಾಡಿದ್ದಾರೆ. ದಲಿತರಿಗೆ ಮೀಸಲಿಟ್ಟ ಎಸ್ಸಿಎಸ್ಟಿ ಅನುದಾನವನ್ನೂ ದುರ್ಬಳಕೆ ಮಾಡಿಕೊಂಡಿದ್ದೀರಿ ಎಂದರು.
ಇನ್ನು ದಲಿತರಿಗೆ ಏನ್ ಕೊಟ್ಟಿದ್ದೀರಾ? ನನ್ಮಂತಹವರು ಚುನಾವಣೆಗೆ ನಿಲ್ಲಬಾರದಾ? ನಾನೂ ಕೂಡ 30 ವರ್ಷದಿಂದ ರಾಜಕೀಯ ಮಾಡ್ಕೋಂಡು ಬಂದಿದ್ದೀನಿ. ಒಂದು ಬಾರಿ ಮಾತ್ರ ಪಕ್ಷೇತರನಾಗಿ ಶಾಸಕನಾಗಿದ್ದೆ, ಸೋತರೂ ಜನರ ಸೇವೆಗೆ 25 ವರ್ಷದಿಂದ ಸದಾ ದುಡಿತಾ ಇದೀನಿ, ಈ ಬಾರಿ ನನಗೆ ಜನರು ಅಶೀರ್ವಾದ ಮಾಡಬೇಕು ಎಂದು ಹನೂರಿನಲ್ಲಿ ಬೃಹತ್ ರೋಡ್ ಶೋ ವೇಳೆ ಬಿಜೆಪಿ ಅಭ್ಯರ್ಥಿ ಮನವಿ ಮಾಡಿದರು.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)