ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಏರಿಕೆ ಆಗುತ್ತಲೇ ಇದೆ. ಬಿಬಿಎಂಪಿ ಎಷ್ಟೇ ಹರಸಾಹಸ ಪಟ್ಟರೂ ಪ್ರಕರಣ ಸಂಖ್ಯೆ ಕಡಿಮೆಯಾಗುವ ಸೂಚನೆಯೇ ಇಲ್ಲ. ಈ ನಡುವೆ ಆತಂಕಕಾರಿ ಸುದ್ದಿಯೊಂದು ಬಯಲಾಗಿದೆ. ಬಹುತೇಕ ಡೆಂಘೀ ಕೇಸ್ಗಳು ನಗರದ ಅಪಾರ್ಟ್ಮೆಂಟ್ಗಳಲ್ಲಿ ದಾಖಲಾಗುತ್ತಿವೆ. ಇದು ವಾರ್ನಿಂಗ್ ಸಂಕೇತನಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಉಂಟಾಗಿದೆ…
ಯೆಸ್ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇಸ್ ಜಾಸ್ತಿ ಆಗುವ ಸಂಕೇತ ಸಮುದಾಯಕ್ಕೆ ಹರಡಿದ್ದು. ತದನಂತರ ಏಕಾಏಕಿ ಕೋವಿಡ್ ಮಾಸ್ ಆಗಿ ಹರಡಿ ಹೋಗಿತ್ತು.. ಅದರಂತೆ ಇದೀಗ ಡೆಂಗ್ಯೂ ರೆಡ್ ಅಲರ್ಟ್ ನೀಡಿದೆ…ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳ ಬೆಂಗಳೂರಲ್ಲಿ ದಾಖಲಾಗುತ್ತಿದೆ. ಡೆಂಘಿಗೆ ಬೆಂಗಳೂರು ಹಾಟ್ ಸ್ಪಾಟ್ ಆಗ್ತಿದೆ. ಸದ್ಯ ಬೆಂಗಳೂರಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಡೆಂಘಿ ಕೇಸ್ಗಳಿದ್ದು, ಈವರೆಗೆ ಬೆಂಗಳೂರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪಾಲಿಕೆ ಖಚಿತ ಪಡಿಸಿದೆ. ಇದರ ನಡುವೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಬೆಂಗಳೂರಿಗರನ್ನು ಆತಂಕಕ್ಕೆ ದೂಡಿದೆ. ಡೆಂಘಿ ಜಾಗೃತಿ ಹಾಗೂ ಲಾರ್ವ ನಾಶಕ್ಕಾಗಿ ಪಾಲಿಕೆ ನಡೆಸಿದ್ದ ಮನೆ ಮನೆ ಸರ್ವೇಯಲ್ಲಿ ಡೆಂಘೀ ಕಮ್ಯೂನಿಟಿ ಸ್ಪ್ರೆಡ್ ಆಗಿರುವ ಆತಂಕ ಕಾಡ್ತಿದೆ.
ಕಾವೇರಿ ವಿವಾದ: ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ
ಬಿಬಿಎಂಪಿ ಸಿಬ್ಬಂದಿ ಮನೆ ಮನೆ ಸರ್ವೇಯಲ್ಲಿ ಆತಂಕಕಾರಿ ಮಾಹಿತಿ ಗೊತ್ತಾಗಿದೆ. ನಗರದಲ್ಲಿ ದಾಖಲಾಗುತ್ತಿರುವ ನೂರು ಪ್ರಕರಣಗಳ ಪೈಕಿ 75 ಪ್ರಕರಣಗಳು ಅಪಾರ್ಟ್ಮೆಂಟ್ ವಾಸಿಗಳಲ್ಲೇ ಕಾಣಿಸಿಕೊಳ್ತಿದೆ. ಸ್ಲಂ ಪ್ರದೇಶಗಳಿಗಿಂತ ಹೆಚ್ಚಿನ ಪ್ರಕರಣಗಳು ಬಹು ಐಷಾರಾಮಿ ಅಪಾರ್ಟ್ಮೆಂಟ್ಗಳಲ್ಲೇ ಪತ್ತೆಯಾಗುತ್ತಿದೆ. ಬಾನೆತ್ತರದ ಕಟ್ಟಡಗಳೇ ಡೆಂಘಿ ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಆಯ್ದುಕೊಳ್ಳುತ್ತಿದೆ ಎಂದು ಪಾಲಿಕೆ ಸರ್ವೇಯಲ್ಲಿ ಗೊತ್ತಾಗಿದೆ. ಸದ್ಯ ಬೆಂಗಳೂರಲ್ಲಿ ದಾಖಲಾಗಿರುವ 4,300ಕ್ಕೂ ಅಧಿಕ ಡೆಂಘಿ ಕೇಸ್ಗಳ ಪೈಕಿ ಶೇಕಡ 75ರಷ್ಟು ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಕಾಣಿಸಿಕೊಂಡಿರೋದ್ರಿಂದ ವಿಶೇಷ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು ನಗರದಲ್ಲಿ ಬರೋಬ್ಬರಿ 17 ಲಕ್ಷ ಮನೆಗಳಿಗೆ ತೆರಳಿ ಪಾಲಿಕೆ ಸಿಬ್ಬಂದಿ ಸರ್ವೇ ನಡೆಸಿದ್ದಾರೆ. ಅಲ್ಲದೆ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಲಾರ್ವ ಸ್ಪಾಟ್ಗಳನ್ನೂ ನಾಶ ಮಾಡಿದ್ದಾರೆ. ಅದಾಗಿಯೂ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಡೆಂಘಿ ಕೇಸ್ ಏರಿಕೆಯಾಗುತ್ತಿದೆ.
ವಾಯ್ಸ್.. ಒಟ್ಟಾರೆ, ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ, ಫಾಗಿಂಗ್, ಸೊಳ್ಳೆ ಔಷಧಿ ಸಿಂಪಡಣೆ ಮಾಡಬೇಕು ಅಂತ ಆದೇಶ ಕೊಟ್ಟರೂ ಯಾವುದೂ ಕೂಡ ಇನ್ನು ಜಾರಿಗೆ ಬಂದಿಲ್ಲ . ಡೆಂಗ್ಯೂ ಪ್ರಕಾರಣ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.. ಮುಖ್ಯವಾಗಿ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಡೆಂಘಿ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಇದನ್ನು ಅದ್ಯಾವ ರೀತಿಯಲ್ಲಿ ತಡೆಗಟ್ಟುತ್ತಾರೆ ಆ ದೇವರೇ ಬಲ್ಲ..