ಇತ್ತೀಚಿನ ದಿನಗಳಲ್ಲಿ ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವ ಕುಂಬಾರರಿಗೆ ಲಾಭ ಪಡೆದುಕೊಳ್ಳುವ ಅದೃಷ್ಟ ಬಂದಿದೆ. ಹಾವೇರಿ ಜಿಲ್ಲೆಯಲ್ಲಿ ಜನರು ತಂಪಾದ ನೀರನ್ನು ಕುಡಿಯಲು ಮಣ್ಣಿನ ಮಡಿಕೆಯ ಮೊರೆ ಹೋಗಿದ್ದಾರೆ. 37 ರಿಂದ 40 ಡಿಗ್ರಿ ತಾಪಮಾನ ಮುಟ್ಟಿರುವ ಹಿನ್ನಲೆ 10 ಗಂಟೆಯ ಒಳಗೆ ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆ ಸೇರುತ್ತಿದ್ದಾರೆ.
ಮಹಿಳೆಯರಲ್ಲಿ ಹೆಚ್ಚುತ್ತಿದೆ PCOD ಕಾಯಿಲೆ ಸಮಸ್ಯೆ!? – ಯಾಕೆ ಗೊತ್ತಾ!?
ಮನೆಯಲ್ಲೂ ನೆಮ್ಮದಿಯಿಂದ ಕೂರಲು ಆಗದೇ ಪ್ಯಾನ್ ಏಸಿ ಮೊರೆ ಹೋಗುತ್ತಿದ್ದಾರೆ. ಉಳ್ಳವರು ಪ್ಯಾನ್ ಏಸಿ ಮೊರೆ ಹೋದರೆ, ಬಡವರು ಬಿಸಣಿಕೆಯ ಆಸರೆ ಪಡೆದಿದ್ದಾರೆ. ಇನ್ನೂ ಬಡವರು ತಂಪಾದ ನೀರು ಕುಡಿಯಲು ಮಣ್ಣಿನ ಮಡಿಕೆ ಖರೀದಿಗೆ ಮುಂದಾಗಿದ್ದಾರೆ.
ಮಣ್ಣಿನಲ್ಲಿ ತಯಾರಾದ ಮಡಿಕೆಯಲ್ಲಿ ನೀರನ್ನು ಇಟ್ಟರೆ ತಂಪಾಗಿ ಇರುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳೆಯದು ಅಂತಿದ್ದಾರೆ ವ್ಯಾಪಾರಸ್ಥರು. ದೀಪಾವಳಿಯಲ್ಲಿ ಮಾತ್ರ ವ್ಯಾಪಾರವಾಗುತ್ತಿದ್ದ ಮಣ್ಣಿನ ಮಡಿಕೆಗಳು, ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಒಟ್ಟಾರೆ ಈ ಭಾರಿ ಬಿಸಿಲ ತಾಪಕ್ಕೆ ಅಕ್ಷರಶಃ ರಾಜ್ಯದ ಜನರು ಕಂಗೆಟ್ಟಿದ್ದಾರೆ. ಯಾವಾಗ ಮಳೆ ಬರುತ್ತೋ ಎಂದು ದೇವರಲ್ಲಿ ಪಾರ್ಥಿಸುತ್ತಿದ್ದಾರೆ.