ಗದಗ:– ಪಿಎಸ್ಐ ಅಮಾನತಿಗೆ ಒತ್ತಾಯಿಸಿ ಶ್ರೀರಾಮಸೇನೆ, ಗೋಸಾವಿ ಸಮಾಜದಿಂದ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ ಕೊಡಲಾಗಿದೆ.
ಕರ್ನಾಟಕದಲ್ಲಿ ಇನ್ನೂ 5 ದಿನ ಮಳೆ ಆರ್ಭಟ: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!
ಲಕ್ಷ್ಮೇಶ್ವರ ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಪ್ರತಿಭಟನೆ ತಡೆಯಲು ಪೊಲೀಸರು ಸಕಲ ರೀತಿಯಲ್ಲೂ ಸಿದ್ದತೆ ಮಾಡಿಕೊಂಡಿದ್ದಾರೆ, ಬಂಧಿಸಿದರೂ ಸರಿ ಪ್ರತಿಭಟನೆ ಮಾಡಿಯೇ ಸಿದ್ದ ಎಂದು ಶ್ರೀರಾಮಸೇನೆ ಹಾಗೂ ಗೋಸಾವಿ ಜನಾಂಗ ಪಟ್ಟು ಹಿಡಿದಿದೆ.
ಬೆಳಿಗ್ಗೆ ಕೊಂಚ ಬಿಗುವಿನ ವಾತಾವರಣದ ನಡುವೆಯೂ ದೈನಂದಿನ ಕಾರ್ಯಚಟುವಟಿಕೆ ನಡೆದಿದೆ. ಸಾರಿಗೆ ಸಂಚಾರ ಎಂದಿನಂತೆ ಸಂಚಾರ ಆಗುತ್ತಿದೆ.
ಬಂದ್ ಬೆಂಬಲಿಸಿ ಹಲವರು ಸ್ವಯಂ ಪ್ರೇರಿತ ಅಂಗಡಿ ಬಂದ್ ಮಾಡಿದ್ದಾರೆ.