ಬೆಂಗಳೂರು:- ಆರ್ ಟಿ ನಗರ ಮುಖ್ಯ ರಸ್ತೆ ಕಾಮಗಾರಿ ತಡವಾಗಿ ಸಾಗುತ್ತಿರುವ ಹಿನ್ನೆಲೆ ಹತ್ತಿರದ ಹೋಟೆಲ್, ಬೇಕರಿ, ಅಂಗಡಿಗಳಿಗೆ ಬಿಗ್ ಲಾಸ್ ಆಗಿದೆ.
Karnataka weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ…!
ಕಳೆದ 6 ತಿಂಗಳಿಂದ ರಸ್ತೆ ಕಾಮಗಾರಿಯಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಆರ್ ಟಿ ನಗರ ರಸ್ತೆ ದುರಸ್ತಿ ಕೆಲಸ ಬಹಳ ನಿಧಾನವಾಗಿ ನಡೆಯುತ್ತಿದ್ದು, ಅಂದಾಜು 500ಕ್ಕಿಂತ ಹೆಚ್ಚಿನ ಅಂಗಡಿಗಳಿಗೆ ಪ್ರಾಬ್ಲಂ ಆಗುತ್ತಿದೆ. ಪಿ.ಸಿ ರಾವ್ ಬೆಂಗಳೂರು ಹೋಟೆಲ್ ಸಂಘ ಅಧ್ಯಕ್ಷ ಮನವಿ ಪತ್ರ ಬರೆದಿದ್ದಾರೆ. ಈ ಭಾಗದ ಉದ್ಯಮಿಗಳಿಂದ ಅಂದಾಜು 60 ಕೋಟಿಗಿಂತಲೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಮಾಡಲಾಗಿದೆ. ಸುಮಾರು 120 ಕೋಟಿಗಿಂತಲೂ ಅಧಿಕ GST ಕೂಡ ಸಂಗ್ರಹ ಮಾಡಲಾಗಿದೆ.
Excise, Trade, FSSAI ಮತ್ತು ಬೇರೆ ಬೇರೆ ಕಂದಾಯ ಕೂಡ ಪಾವತಿಸಲಾಗುತ್ತಿದೆ..ಸಾವಿರಾರು ಜನರಿಗೆ ಉದ್ಯೋಗ ನೀಡಿರುತ್ತೇವೆ ಅಂಗಡಿಗಳಿಗೆ ಕಾಮಗಾರಿ ವಿಳಂಬದಿಂದ ನಷ್ಟ ಅನುಭವಿಸಲಾಗಿದೆ. ಕಾಮಗಾರಿಯಿಂದ ವ್ಯಾಪಾರ ಅಂದಾಜು ಶೇಕಡ 50ಕ್ಕಿಂತಲೂ ಹೆಚ್ಚು ಕಡಿತವಾಗಿದ್ದು, ದೈನಂದಿನ ಖರ್ಚು-ವೆಚ್ಚಗಳು, ಕಟ್ಟಡ ಬಾಡಿಗೆ ಹಾಗೂ ಕೆಲಸಗಾರರ ಸಂಬಳ ಸರಿದೂಗಿಸಲು ತೊಂದರೆಯಾಗುತ್ತಿದೆ. ಆರ್ ಟಿ ನಗರ ರಸ್ತೆ ದುರಸ್ತಿ ಕೆಲಸ ಪೂರ್ತಿ ಯಾಗುವರೆಗೆ ಆಸ್ತಿ ತೆರಿಗೆ ಹಾಗೂ ಲೈಸನ್ಸ್ ಶುಲ್ಕಗಳಲ್ಲಿ ಶೇಕಡ 50% ವಿನಾಯಿತಿ ನೀಡಬೇಕು. ಚುನಾವಣಾ ಸಂಹಿತೆ ನಂತರ ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕಾಗಿ ವಿನಂತಿ ಮಾಡಲಾಗಿದೆ.
ವರ್ಷಗಟ್ಟಲೆ ಕಾಮಗಾರಿ ಮುಗಿಸದೆ ಇರುವ ಗಾಂಧೀಬಜಾರ್, ಆರ್.ಆರ್.ನಗರ ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ವಿನಂತಿ ಮಾಡಲಾಗಿದೆ. ಉದ್ಯಮಿಗಳಿಗೂ ಆಸ್ತಿ ತೆರಿಗೆ ಹಾಗೂ ಲೈಸನ್ಸ್ ಶುಲ್ಕದಲ್ಲಿ ಶೇಕಡ 50% ವಿನಾಯಿತಿ ಕೊಟ್ಟು ಸಹಕರಿಸಬೇಕು. ಈ ಬಗ್ಗೆ ತಕ್ಷಣ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕಾಗಿ. ಬೃಹತ್ ಬೆಂಗಳೂರು ಹೋಟೆಲ್ ಸಂಘದಿಂಡ ಮನವಿ ಪತ್ರ ಬರೆದಿದೆ.