ಅಂಡರ್ 19 ಏಕದಿನ ವಿಶ್ವಕಪ್ನಲ್ಲೂ ಆಸ್ಟ್ರೇಲಿಯಾ ತಂಡ ಭಾರತದ ಟ್ರೋಫಿ ಗೆಲ್ಲುವ ಕನಸನ್ನು ಮುರಿದಿದೆ. ಫೈನಲ್ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ 254 ರನ್ಗಳ ಸವಾಲನ್ನು ಆಸ್ಟ್ರೇಲಿಯಾ ನೀಡಿತ್ತು. ಆದರೆ, ಆಸ್ಟ್ರೇಲಿಯದ ಬೌಲರ್ಗಳ ಮುಂದೆ ಮಂಡಿ ಊರಿದ ಭಾರತ 43.5 ಓವರ್ಗಳಲ್ಲಿ 174 ರನ್ಗಳಿಗೆ ಆಯಿತು. ಇದರೊಂದಿಗೆ ಆಸ್ಟ್ರೇಲಿಯ 2010ರ ನಂತರ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ.
ಆದರೆ, ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್ ಅಚ್ಚುಕಟ್ಟಾಗಿ ಮಾತನಾಡಿದ್ದಾರೆ. ಸೋತರೂ ಎದೆಗುಂದದ ಉದಯ್, ನಮ್ಮ ಹುಡುಗರ ಬಗ್ಗೆ ನನಗೆ ಹೆಮ್ಮೆ ಇದೆ, ಅವರು ಚೆನ್ನಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ತಂಡದ ಆಟಗಾರರು ಟೂರ್ನಿಯುದ್ದಕ್ಕೂ ಉತ್ತಮ ಹೋರಾಟದ ಮನೋಭಾವ ತೋರಿದರು. ನಾವು ಇಂದು ಕೆಲವು ಅನಗತ್ಯ ಶಾಟ್ಗಳನ್ನು ಆಡಿದ್ದೇವೆ, ಓವರ್ಗಳ ಮಧ್ಯದಲ್ಲಿ ನಿಂತು ಆಡಲಿಲ್ಲ. ನಾವು ಫೈನಲ್ ಪಂದ್ಯಕ್ಕೆ ಎಲ್ಲ ಯೋಜನೆ ರೂಪಿಸಿದ್ದೆವು. ಆದರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಉದಯ್ ಸಹರಾನ್ ಹೇಳಿದ್ದಾರೆ.