ಹುಬ್ಬಳ್ಳಿ; ಖ್ಯಾತ ನಟ ದಿ.ಶಂಕರನಾಗ್ ಅವರ ಹುಟ್ಟು ಹಬ್ಬದ ಅಂಗವಾಗಿ ನವೆಂಬರ್ ನವೆಂಬರ್ 9 ರಂದು ಅಟೋ ಚಾಲಕರ ದಿನಾಚರಣೆ ಆಚರಿಸಲು ಸರಕಾರ ಘೋಷಣೆ ಮಾಡಬೇಕು ಎಂದು ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಒತ್ತಾಯ ಮಾಡಿದರು. ನಗರದ ಚೆನ್ನಮ್ಮ ಸರ್ಕಲ್ ಬಳಿ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಅಟೋ ಚಾಲಕರ ಮಾಲೀಕರ ಸಂಘದ ವತಿಯಿಂದ ಖ್ಯಾತ ನಟರಾಗಿದ್ದ ದಿವಂಗತ ಅಟೋ ರಾಜ್ ಶಂಕರ್ ನಾಗ್ ಅವರ ಹುಟ್ಟು ಹಬ್ಬ ಅದ್ದೂರಿಯಾಗಿ ಆಯೋಜನೆ ಮಾಡಿದ ಸಂದರ್ಭದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ನಟ ಶಂಕರ್ ನಾಗ್ ಕೇವಲ ನಟರು ಆಗಿದ್ದಿಲ್ಲ. ಅವರ ನಟನೆ ಮೂಲಕ ಸಮಾಜದಲ್ಲಿನ ವಿವಿಧ ವರ್ಗಗಳ ನೋವು ನಲಿವುಗಳಿಗೆ ಸ್ಪಂದಿನೆ ಮಾಡುತಿದ್ದರು. ಇಂದು ಪೊಲೀಸ್ ಇಲಾಖೆ ಹಾಗೂ ಅಟೋ ಚಾಲಕರು ಇಷ್ಟೊಂದು ಉತ್ಸಾಹ ಹಾಗೂ ಧೈರ್ಯದಿಂದ ಕೆಲಸ ಮಾಡಬೇಕು ಎಂದರೆ ಅವರ ಕೊಟ್ಟ ಸಂದೇಶದಿಂದ ಎಂದರು. ಆದ್ದರಿಂದ ಸರ್ಕಾರ ಕೂಡಲೇ ಶಂಕರ್ ನಾಗ್ ಅವರ ಜನ್ಮ ದಿನದಂದು ರಾಜ್ಯಾದ್ಯಂತ ಅಟೋ ಚಾಲಕರ ದಿನಾಚರಣೆ ಘೋಷಣೆ ಮಾಡಬೇಕು ಆ ದಿನ ರಜೆ ಘೋಷಣೆ ಮಾಡಿ ಇಡೀ ದಿನ ಶಂಕರ್ ನಾಗ್ ಅವರ ನೆನೆಪಿನಡಿ ಅನೇಕ ಕಾರ್ಯಕ್ರಮಗಳು ನಡೆಯುವಂತೆ ಮಾಡಬೇಕು ಎಂದು ಒತ್ತಾಯ ಮಾಡಿದ ಅವರು,
ಚಾಲಕರ ಬಗ್ಗೆ ಚಿಂತನ ಮಂಥನವನ್ನು ಮಾಡಬೇಕು ಏಕೆಂದರೆ ಚಾಲಕರು ತಮ್ಮ ಜೀವನದ ಹಂಗನ್ನು ತೊರೆದು ಪ್ರಯಾಣಿಕರನ್ನು ಸುಖಕರವಾಗಿ ಕರೆದುಕೊಂಡು ಹೋಗಿ ಹಗಲಿರುಳು ಎನ್ನದೆ ನಿದ್ದಿ ಗೆಟ್ಟು ಪ್ರಾಣ ರಕ್ಷಿಸಿ ಸುರಕ್ಷಿತವಾಗಿ ಸಂಚರಿಸುವ ಕೆಲಸಗಳನ್ನು ಮಾಡುತ್ತಿರುವ ಚಾಲಕರಿಗೆ ಅನೇಕ ಸೌಲಭ್ಯಗಳು ದೊರಕಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಮುರುಳಿ ಇಂಗಳಹಳ್ಳಿ, ದಾವುದಲ್ಲಿ ಶೇಕ್, ದಾವಲ್ ಸಾಬ್ ಕೊರಟ್ಟಿ ,ರಫಿ ಕುಂದಗೋಳ, ಮಹಾವೀರ್ ಬಿಲಾನ ಗುರು ಬೆಟಗೇರಿ, ಜಾಫರ್ ಕೆರೂರ್ ,ಕಲ್ಲಪ್ಪ ಅಣ್ಣಿಗೇರಿ ಅರುಣ್ ಕಡೆಮನಿ ಶ್ರೀಕಾಂತ್ ದಾಸರ್ ಸಲ್ಮಾನ್ ಸಾಧಿಕ್ ರಾಕೇಶ್ ರಾಜೇಶ್ ಬಿಜ್ವಾಡ ಮಾರುತಿ ಅಂಚಿ ಟಗೇರಿ ಸದಸ್ಯರು ಪಾಲ್ಗೊಂಡಿದ್ದರು