ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆಯನ್ನ ತಹಬದಿಗೆ ತರುವ ಕಾರ್ಯವನ್ನ ಪೊಲೀಸರು ಮಾಡಬೇಕು ಈ ಕುರಿತು ರಾಜ್ಯ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರು.
ಈಗ ನಗರದಲ್ಲೀಗ ಆಟೋ ಸಂಘದ ಅಧ್ಯಕ್ಷನ ಮಗನ ಕೊಲೆ ನಿನ್ನೆ ನಡೆದಿದ್ದು ಇನ್ನೂ ಕೊಲೆಯ ಬಗ್ಗೆ ಪೊಲೀಸರು ಸ್ಪಷ್ಟತೆ ಪಡಿಸಿಲ್ಲ ಆದ್ರೆ ಶೇಖರಯ್ಯ ಮಠಪತಿ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ಸತ್ಯಾಸತ್ಯೆಯನ್ನ ಪೊಲೀಸ್ ಹೊರತರಬೇಕು.ನಾನೂ ಈಗಾಗಲೇ ಪೊಲೀಸರ ಜೊತೆಗೆ ಮಾತನಾಡಿದಾಗ ತಲೆ ಭಾಗಕ್ಕೆ ಗಾಯ ಆಗಿದೆ ಎಂದು ಹೇಳಿದ್ದಾರೆ.
ತೂಕ ಕಡಿಮೆ ಮಾಡಿಕೊಳ್ಳುವಾಗ ಮೀನು ಮತ್ತು ಚಿಕನ್ʼಗಳಲ್ಲಿ ಯಾವುದು ಒಳ್ಳೆಯದು..? ಇಲ್ಲಿದೆ ನೋಡಿ
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಜಾಂಶ ಹೊರಬರಲಿದೆ. ಕೊಲೆ ಆಗಿದ್ದರೇ ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ಮಾಡಬೇಕು.ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರೆಲ್ಲರನ್ನೂ ಬಂಧಿಸಬೇಕು. ಈ ರೀತಿಯ ಘಟನೆಗಳು ನಡೆಯಬಾರದು. ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿವೆ ಈ ಆಗಬಾರದು ಎಂದರು. ಹುಬ್ಬಳ್ಳಿ ಧಾರವಾಡದಲ್ಲಿ ಡ್ರಗ್ಸ್ ಗಾಂಜಾ ಹಾವಳಿ ಹೆಚ್ಚಾಗಿದ್ದು ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದರು.