ಉತ್ತರಪ್ರದೇಶ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಯಾಗ್ ರಾಜ್ನ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಪತ್ನಿ ಸಮೇತ ಮಹಾಕುಂಭಮೇಳಕ್ಕೆ ತೆರಳಲಿರುವ ಡಿಕೆಶಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸಿದ್ದಾರೆ.
ಇನ್ನೂ ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಸಿಎಂ ಹೇಳುತ್ತಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿಕೇಂದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಹ ಅಲ್ಲೇ ಉಪಸ್ಥಿತರಿದ್ದರು. ಡಿಕೆಶಿ ದಂಪತಿಯ ಪುಣ್ಯಸ್ನಾನದ ವೇಳೆ ಇಬ್ಬರನ್ನು ಸಹ ಹರಿಸಿದರು. ಡಿಕೆಶಿ ಅವರಿಗೆ ಉತ್ತರಪ್ರದೇಶದ ಅಧಿಕಾರಿಗಳು ಸಹ ಸಾಥ್ ನೀಡಿದರು.
ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುಣ್ಯಸ್ನಾನದ ಬಗ್ಗೆ ಟೀಕೆ ಮಾಡಿದ್ದರು. ಇದೀಗ ಅವರದ್ದೇ ಪಕ್ಷದ ನಾಯಕರಾದ ಡಿಕೆಶಿವಕುಮಾರ್ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಡಿಕೆಶಿ ಅವರ ಪುತ್ರಿ ಸಹ ಮಹಾಕುಂಭಮೇಳದಲ್ಲಿ ಭಾಗಿಯಾಗಿ, ಪುಣ್ಯಸ್ನಾನ ಮಾಡಿದರು.