ಬೆಂಗಳೂರು:- ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾರೆ. ಜೈಲಿನಲ್ಲಿ ನಟ ದರ್ಶನ್ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗಿ ಸೆರೆವಾಸದಲ್ಲಿ ಮೌನಕ್ಕೆ ಶರಣಾಗಿದ್ರೆ, ಇತ್ತ ಡಿ ಗ್ಯಾಂಗ್ನ ಎ17 ಆರೋಪಿ ನಿಖಿಲ್ ನಾಯಕ್ ಫ್ಯಾಮಿಲಿ ಮನೆಗೆ ಆಧಾರ ಸ್ತಂಭವಾಗಿದ್ದ ಮಗ ಜೈಲು ಸೇರಿದ ದಿನದಿಂದಲೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ನೀವೇನಾದರೂ ಕಡಿಮೆ ಬೆಲೆಗೆ ಉತ್ತಮ ಕಾರನ್ನೇನಾದರೂ ಖರೀದಿಸಬೇಕೇ: ಇಲ್ಲಿದೆ ನೋಡಿ!
ಯೆಸ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿ ಹದಿನಾಲ್ಕು ದಿನ ಕಳೆದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ಯಾಂಡಲ್ ವುಡ್ ದಾಸ ಸೆರೆವಾಸವನ್ನು ಅನುಭವಿಸುತ್ತಿದ್ದು, ಹೊರಗೆ ಫುಲ್ ವೈಲೆಂಟ್ ಆಗಿದ್ದ ದರ್ಶನ್ ಒಳಗೆ ಫುಲ್ ಸೈಲೆಂಟ್ ಆಗಿದ್ದಾರೆ. ನಿತ್ಯ ಜಿಮ್, ಫಿಟ್ನೆಸ್, ನಾನ್ ವೆಜ್ ಊಟ, ಫಿಲ್ಮ್ ಶೂಟಿಂಗ್ ನಲ್ಲಿ ಬ್ಯೂಸಿ ಇರ್ತಿದ್ದ ನಟ ದರ್ಶನ್ಗೆ ಜೈಲಿನಲ್ಲಿ ಕಂಬಿ ಎಣಿಸೋದು ಬಿಟ್ರೆ ಬೇರೆ ಕೆಲಸವೇ ಇಲ್ಲದಂತಾಗಿದೆ. ಜೈಲೂಟ ಒಗ್ಗದೆ, ನಿದ್ರೆ ಬಾರದೆ ಇದ್ರೂ ಜೈಲಿನಲ್ಲಿ ಸೆರೆವಾಸವನ್ನ ಅನುಭವಿಸುತ್ತಿರುವ ದರ್ಶನ್ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ. ಮೊನ್ನೆಯಷ್ಟೇ ದರ್ಶನ್ ಇಡೀ ಕುಟುಂಬ ಜೈಲಿಗೆ ಭೇಟಿ ನೀಡಿ ದರ್ಶನ್ಗೆ ಧೈರ್ಯ ಹೇಳಿ ಬರುವಂತಹ ಕೆಲಸ ಮಾಡಿದ್ರು. ಇದಾದ ಬಳಿಕ ದರ್ಶನ್ ಕುಟುಂಬದವರಾಗಲಿ, ಆಪ್ತರಾಗಲಿ ಯಾರು ಜೈಲಿನತ್ತ ಮುಖ ಮಾಡಲಿಲ್ಲ. ಇನ್ನೂ ಜೈಲಿನಲ್ಲಿರುವ ದರ್ಶನ್ ಭೇಟಿ ಅಸಾಧ್ಯವೆಂದು ಅಭಿಮಾನಿಗಳು ಕೂಡ ಜೈಲಿನ ಕಡೆ ತಲೆ ಹಾಕುತ್ತಿಲ್ಲ..
ಇನ್ನೂ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ A 17 ಆರೋಪಿಯಾಗಿರುವ ನಿಖಿಲ್ ನಾಯಕ್ ಕುಟುಂಬ ಕಣ್ಣೀರಿನಲ್ಲಿ ದಿನ ದೂಡುತ್ತಿದೆ. ಕಳೆದ ಹತ್ತು ವರ್ಷದಿಂದ
ನಿಖಿಲ್ ನಾಯಕ್ ತಂದೆ ಲಾಲಾಜಿ ನಾಯಕ್ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದು ಮನೆಗೆ ಆಧಾರ ಸ್ತಂಭವಾಗಿದ್ದ ಮಗ ಜೈಲು ಸೇರಿದ್ದರಿಂದ ಜೀವನ ನಡೆಸಲಾಗದೆ ದಿಕ್ಕು ತೋಚದಂತೆ ಇಡೀ ಕುಟುಂಬ ಕಂಗಾಲಾಗಿದೆ. ತಾಯಿ ಮನೆ ಕೆಲಸ ಮಾಡಿದ್ರೆ, ಇಬ್ಬರು ಸಹೀದರಿಯರ ವಿಧ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದ ನಿಖಿಲ್ ಜೈಲು ಸೇರಿದ್ದು, ಕುಟುಂಬಕ್ಕೆ ಬರ ಸಿಡಿಲು ಅಪ್ಪಳಿಸಿದಂತಾಗಿದೆ. ನಮ್ಮ ಕುಟುಂಬ ಸ್ಥಿತಿ ಹೀನಾಮಾನವಾದ ಪರಿಸ್ಥಿತಿಗೆ ತಲುಪಿದ್ದು, ಮಗ ಜೈಲಿಗೆ ಹೋದ ಬಳಿಕ ಮನೆ ನಿರ್ವಹಣೆ ಕಷ್ಟಕರವಾಗಿದೆ. ಮಗನನ್ನು ನೋಡದೆ ಮನೆಯಲ್ಲಿ ಇರೋಕೆ ಆಗ್ತಿಲ್ಲ, ನಾವು ಬಡಪಾಪಿಗಳು ತುಂಬಾ ಕಷ್ಟದಲ್ಲಿದ್ದೇವೆ.
ನನ್ನ ಮಗನಿಗೆ ಜಿರಳೆ ಕಂಡ್ರು ಅಷ್ಟು ಭಯ ದೇವ್ರಾಣೆ ನನ್ನ ಮಗ ಕೊಲೆ ಮಾಡುವಂತವನಲ್ಲ. ದರ್ಶನ್ ಕಡೆಯವರು ಇದುವರೆಗೂ ಯಾರು ಭೇಟಿ ಮಾಡಿಲ್ಲ, ನಮಗೆ ದುಡ್ಡು ಕಾಸು ಏನು ಬೇಡ ಮನೆಗೆ ಮಗ ಬಂದ್ರೆ ಸಾಕು ಎಂದು ಕೊಲೆ ಆರೋಪಿ ನಿಖಿಲ್ ನಾಯಕ್ ತಂದೆ ಲಾಲಾಜಿ ನಾಯಕ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಕಳೆದೆರಡು ದಿನಗಳಿಂದ ಕುಟುಂಬಸ್ಥರು, ಆಪ್ತರು ಸೇರಿದಂತೆ ಅಭಿಮಾನಿಗಳು ಯಾರು ಸಹ ಜೈಲಿನತ್ತ ಸುಳಿದಿಲ್ಲ. ಹೈಫೈ ಲೈಫ್ ಲೀಡ್ ಮಾಡಿದ್ದ ನಟ ದರ್ಶನ್ ಮತ್ತು ಪವಿತ್ರಾ ಗೌಡ ದುಗುಡ ದುಮ್ಮಾನದಲ್ಲಿಯೇ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಇತ್ತ ಆರೋಪಿ ನಿಖಿಲ್ ನಾಯಕ್ ಕುಟುಂಬ ಮನೆಗೆ ಆಧಾರ ಸ್ತಂಭವಾಗಿದ್ದ ಮಗ ಜೈಲು ಸೇರಿದ್ದು ಸಂಕಷ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಇವರ ನೆರವಿಗೆ ದರ್ಶನ್ ಕಡೆಯವರು ಮುಂದಾಗ್ತಾರ ಎಂದು ಕಾದು ನೋಡಬೇಕಿದೆ.