ದರ್ಶನ್ ಅವರ ವರ್ತನೆ ಕೀಳು ಮಟ್ಟದ್ದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತ್ರ ಮೊದಲ ಕಡತಕ್ಕೆ ಸಹಿ ಹಾಕಿದ ಹೆಚ್ಡಿ ಕುಮಾರಸ್ವಾಮಿ !
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುತಾಲಿಕ್, ದರ್ಶನ ಒಬ್ಬ ಶ್ರೇಷ್ಠ ನಟ, ಅವರ ನಟನೆಗೆ ನನ್ನ ಸೆಲ್ಯೂಟ್ ಇದೆ. ಆದರೆ, ಈಗ ನಡೆದಿರುವ ಘಟನೆ ಅತ್ಯಂತ ಅಮಾನುಷವಾದದ್ದು. ನಟನೆ ಬೇರೆ, ನಿಜಜೀವನದಲ್ಲಿ ದರ್ಶನ್ ವರ್ತನೆ ಬೇರೆಯೇ ಇದೆ. ಅವರ ವರ್ತನೆ ಕೀಳುಮಟ್ಟದ್ದು ಮತ್ತು ಅಮಾನುಷ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ. ಅಭಿಮಾನಿಗಳ ಅಭಿಮಾನ ನಟರ ಅಭಿನಯಕ್ಕೆ ಸೀಮಿತವಾಗಿರಬೇಕು. ನಟನ ಅಮಾನುಷ ವರ್ತನೆಗೆ ಅಭಿಮಾನಿಗಳು ಬೆಂಬಲಿಸಬಾರದು ಎಂದಿದ್ದಾರೆ.