ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಬಗ್ಗೆ ದರ್ಶನ್ ಪಶ್ಚಾತಾಪ ಪಡುತ್ತಿದ್ದಾರೆ. ಕಸ್ಟಡಿಯಲ್ಲಿ ನಟ ದರ್ಶನ್ ಪಶ್ಚಾತ್ತಾಪದ ನುಡಿಗಳು ಆಡಿದ್ದಾರೆ ಎನ್ನಲಾಗಿದೆ. ತನ್ನೊಂದಿಗೆ ಸಹಚರರ ಜೀವನವೂ ಹಾಳು ಮಾಡಿದೆ ಎಂಬುದರ ಬಗ್ಗೆ ನಟ ಪಶ್ಚಾತ್ತಾಪ ಪಟ್ಟಿದ್ದಾರಂತೆ. ಒಬ್ಬ ನಟನಾಗಿ ಉತ್ತಮ ಸ್ಥಾನದಲ್ಲಿದ್ದುಕೊಂಡು ಈ ಕೇಸ್ ನಲ್ಲಿ ಬಂಧನವಾಗಿರೋದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ: ಭೀಕರ ಅಪಘಾತ.. ಚಿಕ್ಕೆಬನ್ನೂರು ಬಳಿ ಇಬ್ಬರ ಸಾವು!
ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರನ್ನ ಹೇಗೆ ಫೇಸ್ ಮಾಡೋದು ಹೇಗೆ ಎನ್ನುವ ಟೆನ್ಷನ್ಗೆ ಒಳಗಾಗಿದ್ದಾರಂತೆ ದರ್ಶನ್. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದು ಬೆಂಗಳೂರಿನಲ್ಲಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ನಂತರ ಮೃತದೇಹ ಮೋರಿಗೆ ಎಸೆಯಲಾಗಿತ್ತು.
ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಮಾಡ್ತಿದ್ದ ಎನ್ನುವ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಒಟ್ಟೂ 17 ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಅವರನ್ನು ವಿಚಾರಣೆ ನಡೆಯುತ್ತಿದೆ. ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ ಎನ್ನುತ್ತಿದ್ದ ದರ್ಶನ್ ಮುಂದೆ ಸಾಕ್ಷಿ ಇಟ್ಟು ಅಧಿಕಾರಿಗಳು ಪ್ರಶ್ನೆ ಮಾಡ್ತಿದ್ದಾರೆ. ಈಗ ನಟ ಸ್ವಲ್ಪ ಸೈಲೆಂಟ್ ಆಗಿದ್ದು ಆಗಿರುವ ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ.
ಶೆಡ್ ಒಳಗಡೆ, ಹೊರಗಡೆ 15ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳಿವೆ. ನಟ ದರ್ಶನ್ ಗೆ ಮುಳುವಾಗಿದ್ದೇ ಈ ಸಿಸಿ ಕ್ಯಾಮರಾಗಳು ಎನ್ನಲಾಗುತ್ತಿದೆ. ನಟ ದರ್ಶನ್ ಬರೋದು, ಶೆಡ್ ನಿಂದ ಹೋಗೋದು ಎಲ್ಲವೂ ಈ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ.
15ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಡಿವಿಆರ್ ಸಮೇತ ಸೀಜ್ ಮಾಡಲಾಗಿದ್ದು, ಇಡೀ ಗ್ಯಾಂಗ್ ನ ಎಂಟ್ರಿಯಿಂದ ಹಿಡಿದು ಎಕ್ಸಿಟ್ ವರೆಗೂ ಸಂಪೂರ್ಣ ರೆಕಾರ್ಡ್ ಆಗಿದೆ ಎನ್ನಲಾಗಿದೆ. ಶೆಡ್ ನಲ್ಲಿ ಸೀಜ್ ಮಾಡಿದ್ದ ವಾಹನಗಳ ರಕ್ಷಣೆಗೆಂದೇ ಈ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು
ಈಗ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿಸ್ತಾ ಇರೋದು ಕೂಡಾ ಇದೇ ಸಿಸಿ ಕ್ಯಾಮರಾಗಳು. ವಾಹನಗಳನ್ನು ರಕ್ಷಿಸೋ ಕಾರಣದಿಂದಲೇ ಈ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬಹುತೇಕ ಶೆಡ್ ಒಳಗಡೆ ಹಲ್ಲೆ ಮಾಡೋ ದೃಶ್ಯ ಕೂಡ ಸೆರೆಯಾಗಿರಬಹುದು ಎನ್ನಲಾಗಿದೆ. ಸದ್ಯ ಪೊಲೀಸರು ಎಲ್ಲಾ ಸಿಸಿ ಕ್ಯಾಮರಾಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)