ಬಳ್ಳಾರಿ:- ಬಾಡಿಗೆ ಮನೆ ಹುಡುಕಾಟದಲ್ಲಿ ಡಿ ಬಾಸ್ ಕುಟುಂಬ ಇದ್ದು, ಛೇ ಎಂಥಾ ಪರಿಸ್ಥಿತಿ ಬಂತಪ್ಪ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ದಿನವಿಡೀ ಈ ಎಲೆ ನೀರು ಕುಡಿದ್ರೆ ಬ್ಲಡ್ ಶುಗರ್ ಕಂಟ್ರೋಲ್ನಲ್ಲಿರುತ್ತಂತೆ!
ಬಳ್ಳಾರಿ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಅವರು ಇನ್ನೂ ಎಷ್ಟು ದಿನಗಳವರೆಗೆ ಇಲ್ಲಿ ಇರಲಿದ್ದಾರೆ ಎಂಬುದು ಅಸ್ಪಷ್ಟವಾಗಿದೆ. ಹೀಗಾಗಿ ಬೆಂಗಳೂರಿನಿಂದ ಬಳ್ಳಾರಿಗೆ ಸ್ಥಳಾಂತರವಾಗಿದ್ದರಿಂದ ಮಾನಸಿಕವಾಗಿ ಕುಗ್ಗಿರುವ ಅವರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಕಾರಾಗೃಹದ ನಿಯಮದಂತೆ ಭೇಟಿಗೆ ಸುಲಭವಾಗಲು ಅವರು ಕುಟುಂಬಸ್ಥರು ಬಳ್ಳಾರಿಯಲ್ಲಿ ಬಾಡಿಗೆ ಮನೆ ಹುಡುಕಾಟಕ್ಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಬಳ್ಳಾರಿಯಿಂದ ಬೆಂಗಳೂರು 350ಕಿ.ಮೀ. ದೂರವಿದೆ. ಪ್ರತಿವಾರ ಅವರನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಸುದೀರ್ಘ ಪ್ರಯಾಣ ಕಷ್ಟವಾಗಲಿದೆ. ಈ ಹಿನ್ನೆಲೆ ಕುಟುಂಬದ ಒಬ್ಬರನ್ನು ಬಳ್ಳಾರಿಯ ಬಾಡಿಗೆ ಮನೆಯಲ್ಲಿ ಇರಿಸಲು ಆಪ್ತ ವಲಯದಲ್ಲಿ ಚರ್ಚೆ ನಡೆದಿದೆ.
ದರ್ಶನ್ ಅವರನ್ನು ಭೇಟಿಯಾಗಲು ಅವರ ಪತ್ನಿ, ಪುತ್ರ ಹಾಗೂ ವಕೀಲರು ಸೆ.2ರಂದು ಆಗಮಿಸುವ ಸಾಧ್ಯತೆ ಹೆಚ್ಚಿದೆ. ಅವರ ಸ್ಥಳಾಂತರ ಬಳಿಕ ಆರಂಭದ ಏಳು ದಿನ ಕುಟುಂಬಸ್ಥರು, ಹಾಗೂ ವಕೀಲರ ನಿರಂತರ ಭೇಟಿಗೆ ಅವಕಾಶವಿದೆ. ಹೀಗಾಗಿ ಬಾಡಿಗೆ ಮನೆ ಮಾಡುವ ನಿರ್ಧಾರವನ್ನು ಡಿ ಬಾಸ್ ಕುಟುಂಬ ಮಾಡಿಕೊಂಡಿದೆ.
ಇನ್ನೂ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆದ ಆರೋಪ ಹಿನ್ನೆಲೆ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದ ಹೈ ಸೆಕ್ಯೂರಿಟಿ ಸೆಲ್ನಲ್ಲಿ ಇರಿಸಲಾಗಿದೆ. ಸದ್ಯ ದರ್ಶನ್ ಅವರದು ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಂತಾಗಿದೆ. ಸ್ಥಳ ಬದಲಾವಣೆಯಿಂದ ಮೊದಲ ದಿನ ಸರಿಯಾದ ನಿದ್ದೆ ಇಲ್ಲದೇ ಜಾಗರಣೆ ಮಾಡಿದ್ದಾರೆ. ಮತ್ತೊಂದೆಡೆ ಸೊಳ್ಳೆಗಳ ಕಾಟದಿಂದ ಜರ್ಜರಿತರಾಗಿದ್ದಾರೆ. ಎರಡು ದಿನಗಳಲ್ಲೇ ಅವರಿಗೆ ಇಲ್ಲಿನ ಜೈಲಿನ ಊಟ ಸೇರುತ್ತಿಲ್ಲ ಎಂಬ ಮಾತೂ ಕೇಳಿಬಂದಿದೆ.