ಕಲಬುರ್ಗಿ:-ಕಲಬುರಗಿಯಲ್ಲಿ ಪದವಿ ವಿಧ್ಯಾರ್ಥಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಜರುಗಿದೆ.
ಕಲಬುರಗಿ ಹೊರವಲಯದ ನಾಗನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ.
Crime News: ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳಿಂದ ಉದ್ಯಮಿಯ ಭೀಕರ ಹತ್ಯೆ!
ಸುಮೀತ್ ಎಂಬ ಯುವಕ ಮುಂಬೈನಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ. ನಾಲ್ಕೈದು ದಿನಗಳ ಹಿಂದೆಯಷ್ಟೇ ತಾಯಿಯೊಂದಿಗೆ ಊರಿಗೆ ಬಂದಿದ್ದ. ಯುವತಿಯೊಬ್ಬಳ ಜೊತೆ ಸುಮಿತ್ ಸೋದರ ಸಚಿನ್ ಸ್ನೇಹ ಹೊಂದಿದ್ದ. ಸಚಿನ್ ಮೇಲಿನ ಕೋಪಕ್ಕೆ ಸುಮಿತ್ ಜೊತೆ ಯುವತಿ ಕಡೆಯವರು ಗಲಾಟೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಸುಮಿತ್ ತಾಯಿ ಜೊತೆ ನಾಲ್ಕೈದು ಜನರು ಗಲಾಟೆ ಮಾಡಿದ್ದರು.
ಈ ಗಲಾಟೆ ವೇಳೆ ಸುಮೀತ್ ಮಲ್ಲಾಬಾದ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಯುವತಿಯ ಕುಟುಂಬಸ್ಥರಿಂದ ಸಚಿನ್ ಸೋದರ ಸುಮೀತ್ ಹತ್ಯೆ ನಡೆದಿದೆ. ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.