ಭಾರತೀಯ ಕ್ರಿಕೆಟ್ ದಿಗ್ಗಜ ಹಾಗೂ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು 2024ರ ಕೆಎಸ್ಸಿಎ ಮಹಾರಾಜಾ ಟ್ರೋಫಿ ಟೂರ್ನಿಯ ಮೈಸೂರು ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಟೀಂ ಇಂಡಿಯಾ ಜೆರ್ಸಿಯಲ್ಲಿ ಭಾರೀ ಬದಲಾವಣೆ: ವಿಶೇಷ ಜರ್ಸಿಯ ಸ್ಪೆಷಾಲಿಟಿ ಏನ್ ಗೊತ್ತಾ?
ದ್ರಾವಿಡ್ ಅವರ ಪುತ್ರ ಸಮಿತ್ ಅವರ ಸೇರ್ಪಡೆ ಬಗ್ಗೆ ಮೈಸೂರು ವಾರಿಯರ್ಸ್ ತಂಡ, ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಪ್ರಕಟಿಸಿದೆ. ಅಂಡರ್-19 ಕೋಚ್ ಬೆಹಾರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ಎದುರು ಕರ್ನಾಟಕ ಆಲ್ರೌಂಡರ್ ಸಮಿತ್ ಎರಡು ನಿರ್ಣಾಯಕ ವಿಕೆಟ್ಗಳನ್ನು ಕಬಳಿಸಿದ್ದರು.
ಮೈಸೂರು ವಾರಿಯರ್ಸ್ ತಂಡ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರನ್ನು ಖರೀದಿಸಿದೆ. ಮೈಸೂರು ಮೂಲದ ಜೆ ಸಜಿತ್ ಅವರನ್ನು 4.8 ಲಕ್ಷ ರೂ. ಗಳಿಗೆ ಪುನಃ ಖರೀದಿಸಿದೆ. ಇನ್ನು ಐಪಿಎಲ್ ಆಟಗಾರ ಹಾಗೂ ರಣಜಿ ಆಟಗಾರ ಕೃಷ್ಣಪ್ಪ ಗೌತಮ್ ಅವರನ್ನು 7.4 ಲಕ್ಷ ರೂ. ಗಳಿಗೆ ಮೈಸೂರು ತಂಡ ಖರೀದಿಸಿದೆ. ನಂತರ ವಿದ್ಯಾಧರ ಪಾಟೀಲ್ 6.4 ಲಕ್ಷ ರೂ. ಗಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.