ಬೆಂಗಳೂರು: ಹೈಕೋರ್ಟ್ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆ ಬಿಟ್ಟ ಮಕ್ಕಳ ಸರ್ವೇಗೆ ಬಿಬಿಎಂಪಿ ಮುಂದಾಗಿದೆ. ಗಾಂಧಿನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕವಾಗಿ ಸರ್ವೇಗೆ ತಯಾರಿ ನಡೆಸಿರೋ ಪಾಲಿಕೆ, ಸರ್ವೇ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆಗೆ ವಹಿಸಿದ್ದು ಪ್ರತಿ ಮನೆಗೆ ತಲಾ 10 ರೂಪಾಯಿಯಂತೆ 30 ಲಕ್ಷ ಮನೆಗಳಿಗೆ ಬರೋಬ್ಬರಿ 3 ಕೋಟಿ ಮೀಸಲಿಡಲು ಹೊರಟಿದೆ.
Hubballi Crime Case: ದೇವಪ್ಪಜ್ಜ ಕೊಲೆ ಪ್ರಕರಣ: ಆರೋಪಿ ಪತ್ತೆಗೆ ಎಂಟು ತಂಡ ರಚನೆ!
ಗಾಂಧಿನಗರ ವಿಧಾನಸಭಾಕ್ಷೇತ್ರದ ಬಳಿಕ ಇತರೆ ಭಾಗಗಳಲ್ಲೂ ಸರ್ವೇ ನಡೆಸೋಕೆ ಚಿಂತನೆ ನಡೆಸಿರೋ ಪಾಲಿಕೆ ಇದಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಕರೆದಿದೆ.
ಇತ್ತ ಪಾಲಿಕೆ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗ್ತಿದೆ. ಒಂದೆಡೆ ಪಾಲಿಕೆ ಶಾಲೆಗಳಿಗೆ ಮೂಲಸೌಕರ್ಯ ನೀಡದೇ ಸರ್ವೇಗೆ ಕೋಟಿ ಕೋಟಿ ಹಣ ಕೊಡಲು ಹೊರಟಿದ್ರೆ, ಮತ್ತೊಂದೆಡೆ ಈಗಾಗಲೇ ಸರ್ವೇ ಹೆಸರಲ್ಲಿ ಅಕ್ರಮ ಎಸಗಿದ್ದ ಚಿಲುಮೆ ಸಂಸ್ಥೆಯ ಹಗರಣದಿಂದ ಜನರು ತಮ್ಮ ಡೇಟಾ ನಿಡೋಕೆ ಆತಂಕಪಡುವಂತಾಗಿದೆ. ಸದ್ಯ ಮಕ್ಕಳ ಸರ್ವೇ ನೆಪದಲ್ಲಿ ಖಾಸಗಿ ಮಾಹಿತಿ ಕಲೆಹಾಕೋ ಖಾಸಗಿ ಸಂಸ್ಥೆ, ಅದನ್ನ ದುರುಪಯೋಗ ಮಾಡಿಕೊಳ್ಳಬಹುದು ಅನ್ನೋ ಆರೋಪ ಕೂಡ ಕೇಳಿಬರ್ತಿದೆ.