ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಅವರಿಗೆ ಹುಬ್ಬಳ್ಳಿ ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ನಿರ್ಮಲಾ ಹಂಜಿಗಿ, ಇಂದಿರಾ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಶ ಹಂಜಗಿ,
ಮುಖಂಡರಾದ ಸೋಮಣ್ಣ ಹಂಜಿಗಿ ಮಾತನಾಡಿ, ರಾಮಣ್ಣ ಬಡಿಗೇರ ಒಳ್ಳೆಯ ಜನಪರ ಕಾರ್ಯಕ್ಕೆ ಮಾಡುವವರು ಆಗಿದ್ದುಇನ್ನಷ್ಟು ಜನಪರ ಕಾರ್ಯ ಮಾಡಲಿ ಬಡವರ ಹಿಂದುಳಿದ ಹಾಗೂ ಸಮಾಜದ ತುಳಿತಕ್ಕೆ ಒಳಗಾದವರ ಏಳ್ಗೆಗೆ ಸದಾ ತನು ಮನ ಧನದಿಂದ ಶ್ರಮಿಸಲಿ. ಹುಬ್ಬಳ್ಳಿ ಜನತಾ ಬಜಾರ್ ಬೀದಿ ಬದಿ ವ್ಯಾಪಾರ ಸಮಸ್ಯೆ ಬಗೆಹರಿಸಲು ಕೇಳಿಕೊಂಡರು.ನೂರಾರು ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.