ಹುಬ್ಬಳ್ಳಿ: ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.20 ರಂದು ನಗರದ ಚೆನ್ನಮ್ಮ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಬ್ಬಿಗೆ ಪ್ರತಿ ಟನ್ಗೆ 4 ಸಾವಿರ ರೂ. ಬೆಲೆ ನಿಗದಿ, ಕಬ್ಬಿಗೂ ವಿಮೆ ಜಾರಿ, ರೈತರ ಪಂಪಸೆಟ್ಗೆ ಹಗಲು 12 ತಾಸು ತ್ರಿಫೇಸ್ ವಿದ್ಯುತ್, ಕಾಳಿ ನದಿಯಿಂದ ಧಾರವಾಡ ಜಿಲ್ಲೆಗೆ ನೀರು ಪೂರೈಸಬೇಕು, ಮಹದಾಯಿ ಯೋಜನೆ ಜಾರಿಯಲ್ಲಿ ವಿಳಂಬ, ಬೆಳೆ ವಿಮೆ ಜಾರಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಬರಗಾಲದಿಂದ ಮುಂಗಾರಿ ಮತ್ತು ಹಿಂಗಾರಿಯಿಂದ ತತ್ತರಿಸಿದ ರೈತರಿಗೆ ಪ್ರತಿ ಎಕರೆಗೆ 40,000ರೂ. ಪರಿಹಾರ, ಬೆಳೆ ವಿಮೆ ಕೂಡಲೆ ನೀಡಬೇಕು. ಎಲ್ಲ ಬೆಳೆಗಳಿಗೆ ಎಂಎಸ್ಪಿ ಜಾರಿ ಮಾಡಬೇಕು. ತೋಟಗಾರಿಕೆ ಬೆಳೆಗಳಿಗೆ ಮಾವು ಮತ್ತು ಹೂವಿಗೆ ಕೂಡಲೇ ಪರಿಹಾರ ನೀಡಬೇಕು. ಪ್ರತಿ ಗ್ರಾಮದಲ್ಲಿ ಜಾನುವಾರುಗಳಿಗೆ ಉತ್ತಮ ನೀರು, ಮೇವು ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದ ವಿವಿಧ ಕಡೆಗಳಿಂದ ಅಪಾರ ಪ್ರಮಾಣದ ರೈತರು ರೈತ ನಾಯಕರು ಭಾಗವಹಿಸಲಿದ್ದು,
![Demo](https://ainlivenews.com/wp-content/uploads/2023/12/spoorthi-1.jpg)
ರೈತ ಕೂಲಿ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಹಿಂದಿನ ಯೋಜನೆಗಳನ್ನು ಜಾರಿಗೊಳಿಸುವುದು, ಸರ್ಕಾರದಿಂದ ನೀಡುವ ಎಲ್ಲ ರೀತಿಯ ಆಶ್ರಯ ಯೋಜನೆ, ಮನೆಗಳನ್ನು ಹಾಗೂ ಈ ಹಿಂದೆ ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕು ಸೇರಿ ಇತರ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದು ಧಾರವಾಡ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಜಿಲ್ಲಾ ಉಪಾಧ್ಯಕ್ಷ ವೈ. ಎನ್ .ಪಾಟೀಲ್, ರಾಜ್ಯ ಸಮಿತಿ ಸದಸ್ಯರಾದ ಎಚ್ ಕೆ ಪೂಜಾರ, ಬಸನಗೌಡರ ಹೇಮನಗೌಡರ,ಬಸಣ್ಣ ಬೆಳಿಕಟ್ಟಿ,ಚಂದ್ರಣ್ಣ ಕಟಿಗಿ,ಬಸವರಾಜ ಬೂದಿಹಾಳ, ಕಂಟೆಪ್ಪಗೌಡರ,ಮುಂತಾದವರು ಇದ್ದರು
![](https://ainlivenews.com/wp-content/uploads/2024/01/Ad-Banner-copy-scaled.jpg)