ಬೆಂಗಳೂರು:- ನಗರದಲ್ಲಿ ಪುಟ್ ಪಾಥ್ ತೆರವು ಕಾರ್ಯ ಮತ್ತೆ ಮುಂದುವರಿದಿದೆ. ಮಲ್ಲೇಶ್ವರಂನಲ್ಲಿ ಪಾಟ್ ಪಾಥ್ ಮೇಲೆ ವ್ಯಾಪಾರ ಮಾಡುತ್ತಿದ್ದವರ ಮೇಲೆ ಪಾಲಿಕೆ ಅಧಿಕಾರಿಗಳ ಏಕಾಏಕಿ ದಬ್ಬಾಳಿಕೆ ಮಾಡಿದ್ದಾರೆ.
ಪಾಲಿಕೆ ಅಧಿಕಾರಿಗಳು ಏಕಾಏಕಿ ಬಂದು ರಸ್ತೆಗೆ ಹೂ ಚೆಲ್ಲಿ ಹೊರಟು ಹೋಗಿದ್ದಾರೆ. ಸಾಲ ಮಾಡಿ ಬಂಡವಾಳ ಹಾಕಿದ್ದೇವೆ ಅಂತಾ ರಸ್ತೆಯಲ್ಲೇ ವ್ಯಾಪಾರಗಾರರು ಕೂತಿದ್ದಾರೆ.
ಹಬ್ಬ ಇದೆ ದಯವಿಟ್ಟು ಮೂರು ದಿನ ಅವಕಾಶ ಮಾಡಿ ಕೊಡಿ ಬೀದಿ ಬದಿ ವ್ಯಾಪಾರಗಾರರು ಕೇಳಿಕೊಂಡರೂ, ಅಧಿಕಾರಿಗಳು ಮಾತ್ರ ತೆರವು ಮಾಡಿ ತೆರಳಿದ್ದಾರೆ.