ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಗುಡುಗು ಸಿಡಲು ಮಿಶ್ರಿತ ಭಾರೀ ಮಳೆ ಇಂದು ಸುರಿಯಿತು. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿಯಲ್ಲಿ ಇಂದು ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಸಿಡಿಲು, ಭಾರೀ ಮಳೆ ಜನಜೀವನ ಸಂರ್ಪೂಣ ಅಸ್ತವ್ಯಸ್ತಗೊಳಿಸಿತು.
ಹುಬ್ಬಳ್ಳಿ, ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಜೊತೆಗೆ ಧಾರವಾಡ ಜಿಲ್ಲೆಯ ಕಲಘಟಗಿ ಮುಂತಾದ ಭಾಗಗಳಲ್ಲಿ ಭಾರೀ ಮಳೆ ಸುರಿಯಿತು.
ಮಳೆ ನೀರಿನಿಂದ ತಗ್ಗು ಪ್ರದೇಶದ ಮನೆ,ಮಳಿಗೆ ವಸತಿ ಬಡಾವಣೆಗಳಿಗೆ ನೀರು ನುಗ್ಗಿ ಜನರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಯಿತು ಕಳೆದ ಶನಿವಾರ ಹಾಗೂ ಸೋಮವಾರ ಸುರಿದ ಮಳೆಯಿಂದ ಸಾಕಷ್ಟು ಹಾನಿಯಾಗಿತ್ತು ಇನ್ನು ಆ ತೊಂದರೆಯಿಂದ ಹೊರ ಭಾರದ ಜನರು ಮತ್ತೇ ಇಂದು ವರುಣನ ರುದ್ರನರ್ತನೆಗೆ ಕಂಗಾಲಾದರು.
BMTC Recruitment: ದ್ವಿತೀಯ PUC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ..! ಈಗಲೇ ಅರ್ಜಿ ಸಲ್ಲಿಸಿ
ಹುಬ್ಬಳ್ಳಿಯ ಅಶೊಕ ನಗರ, ಹಳೆ ಹುಬ್ಬಳ್ಳಿ, ಗೋಪನಕೊಪ್ಪ, ರೈಲು ನಿಲ್ದಾಣ ರಸ್ತೆದಾಜಿಬಾನಪೇಟ, ಕಮರಿಪೇಟ, ದುರ್ಗದಬೈಲ್, ಕೋಯಿನ್ ರಸ್ತೆ, ವಿದ್ಯಾನಗರ, ಮೇದಾರ ಓಣಿ, ಹಳೇಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತ್ತು. ಅಲ್ಲದೇ ಬೀದಿಬದಿ ವ್ಯಾಪಾರ, ವಾಣಿಜ್ಯ ಮಳಿಗೆಗಳಿಗೂ ಹಾನಿ ಮಾಡಿದೆ. ರಸ್ತೆಗಳೆಲ್ಲ ತುಂಬಿ ಹರಿದವು. ಇದರಿಂದ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು.
ಸ್ಮಾರ್ಟ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿ ಒಂದೇ ಮಳೆಗೆ ಎಲ್ಲೆಂದರಲ್ಲಿ ನೀರು ನಿಂತು ಜನರು ತೊಂದರೆ ಪಡುವಂತಾಗಿದೆ. ಸ್ಮಾರ್ಟ ಸಿಟಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿತ್ತು.
ನಗರದ ಇಸ್ಲಾಂ ಪುರ, ವಿದ್ಯಾನಗರ , ಕೊಪ್ಪೀಕರ್ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಕೆಲವುಮಳೆ ನೀರು ನುಗ್ಗಿದೆ. ಗುಡುಗು, ಸಿಡಿಲು ಹಾಗೂ ಭಾರಿ ಗಾಳಿಯಿಂದಾಗಿ ಅನೇಕ ಕಡೆಗಳಲ್ಲಿ ಇಂದು ಕೂಡಾ ಮರಗಳು ಧರೆಗುರುಳಿವೆ. ರಸ್ತೆ ಪಕ್ಕದ ಅನೇಕ ಗಿಡಗಳ ಟೊಂಗೆಗಳು ಮುರಿದು ಬಿದ್ದಿವೆ. ಇನ್ನೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು