ಗದಗ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗ್ತಿದ್ದಂತೆ ಇಡೀ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಗದಗ ನಗರದಲ್ಲೂ ಸಹ ಶ್ರೀ ರಾಮನ ಆರಾಧನೆಯನ್ನ ಶ್ರಧ್ಧಾ ಭಕ್ತಿಯಿಂದ ಮಾಡಲಾಗಿದೆ.
ನಗರದ ಟ್ಯಾಗೋರ ರಸ್ತೆಯ ಎರಡನೇ ಕ್ರಾಸ್ ನ ಮಹಾಂತೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿದೆ. ದೀಪೋತ್ಸವ ಮಾಡುವ ಮೂಲಕ ಇಡೀ ಟ್ಯಾಗೋರ್ ರಸ್ತೆಯ ಜನ್ರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ರು. ಬಂದಂತಹ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾದ್ರು.