ಬೆಂಗಳೂರು:- ಮೂಡಾ ಪ್ರಾಸಿಕ್ಯೂಷನ್ ಕೇಸ್ ನಲ್ಲಿ ಸಿಲುಕಿರೋ ಸಿಎಂ ಸಿದ್ದರಾಮಯ್ಯರಿಗೆ ನಾಳೆ ಮಹತ್ವದ ದಿನ, ಕೋರ್ಟ್ ಅಂಗಳದಲ್ಲಿ ಏನಾಗುತ್ತೋ ಎಂಬ ಟೆನ್ಷನ್ ನಲ್ಲಿರುವ ಸಿದ್ದು ನಾಡ ಅಧಿದೇವತೆ ಮೊರೆ ಹೊರಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಸಿದ್ದುಗೆ ಟಾಂಗ್ ಕೊಟ್ಟು ನಾನು ಸಿಎಂ ಆಕಾಂಕ್ಷಿ ಎನ್ನೋ ಮೂಲಕ ಸಿಎಂ ರೇಸ್ ಗೆ ವೇಗ ಕೊಟ್ಟಿದ್ದಾರೆ. ಈ ಮಧ್ಯೆ ಡಿಕೆಶಿ, ಪರಮೇಶ್ವರ್, ಜಾರಕಿಹೊಳಿ, ಎಂಬಿ ಪಾಟೀಲ್ ಸೇರಿ ಘಟಾನುಘಟಿಗಳು ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ….
ಜೈಲಲ್ಲಿ ಮೊಬೈಲ್ ಬಳಸಿದ್ದು ನಿಜ, ಆದರೆ!?: ಸತ್ಯ ಒಪ್ಪಿಕೊಂಡ ನಟ ದರ್ಶನ್!
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಕೊಟ್ಟಿರುವ ಕೇಸ್ ನಾಳೆ ಸಿದ್ದುಗೆ ನಿರ್ಣಾಯಕ ದಿನ. ಈಗಾಗ್ಲೆ ವಾದ ಪ್ರತಿವಾದ ಕೊನೆಯ ಹಂತಕ್ಕೆ ತಲುಪಿದ್ದು ಸೋಮವಾರವೇ ತೀರ್ಪು ಹೊರಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ದೇವರ ಮೊರೆ ಹೋಗಿದ್ದಾರೆ ಮಂಗಳವಾರ ಮೈಸೂರಿಗೆ ತೆರಳುತ್ತಿದ್ದು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮನ್ನು ಈ ಕೇಸ್ ನಿಂದ ಪಾರು ಮಾಡುವಂತೆ ತಾಯಿಯನ್ನು ಪ್ರಾರ್ಥಿಸಲಿದ್ದಾರೆ….
ಕಳೆದೊಂದು ತಿಂಗಳಿನಿಂದ ಕಾಂಗ್ರೆಸ್ ನಲ್ಲು ಸಿಎಂ ಬದಲಾವಣೆ ಕೂಗು ತಣ್ಣಗಾಗಿತ್ತು. ಅದ್ಯಾವಾಗ ಸಿಎಂ ಸಿದ್ದುಗೆ ಪ್ರಾಸಿಕ್ಯೂಷನ್ ಉರುಳು ಕಠಿಣವಾಗ್ತಿದೆಯೋ ಆಗ ಸಿಎಂ ಖುರ್ಚಿ ಆಸೆ ಗರಿಗೆದರಿದೆ ಡಿಸಿಎಂ ಡಿಕೆಶಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ, ಸತೀಶ್ ಗೃಹ ಸಚಿವ ಪರಮೇಶ್ವರ್ ಭೇಟಿ ನಂತರ ಇದೀಗ ಕಾಂಗ್ರೆಸ್ ನ ಹಿರಿಯ ಶಾಸಕ ಮಾಜಿ ಸಚಿವ ಆರ್.ವಿ ದೇಶಪಾಂಡೆ ತಾವು ಸಿಎಂ ಆಗೋ ಆಸೆ ವ್ತಕ್ತಪಡಿಸಿದ್ದಾರೆ. ನಾನು ಸಚಿವ ಆಗಿ ಆಗಿ ದಣಿದಿದ್ದೇನೆ ಇನ್ನೇನಿದ್ರು ಮುಖ್ಯಮಂತ್ರಿ ಆಗಬೇಕು ಅಷ್ಟೇ. ನಾನು ಸಿದ್ದರಾಮಯ್ಯಗಿಂತ ಎರೆಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ರು ಸಿದ್ದರಾಮಯ್ಯ ಅನುಮತಿ ಕೊಡಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ ಫೋನ್ ಟ್ಯಾಫಿಂಗ್ ಆದಾಗ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಟ್ಟಿದ್ರು , ಈಗ ಅಂತ ಪ್ರಸಂಗ ಬಂದಿದ್ಯಾ ಗೊತ್ತಿಲ್ಲ ಅಂತ ಸಿಎಂ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ ದೇಶಪಾಂಡೆ…..
ಗೃಹ ಸಚಿವ ಪರಮೇಶ್ವರ್ ಸಹ ಸಿಎಂ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಕೆಲವು ವಿಷಯ ಹೇಳಿದೆ, ಅದರ ಬಗ್ಗೆಯೂ ಚರ್ಚೆ ನಡೆಸಿದ್ದೇವೆ, ಇಲ್ಲಿನ ವಿದ್ಯಮಾನ, ಕೋರ್ಟ್ ನಡೆ ನೋಡಿಕೊಂಡು ನಂತರ ರಾಷ್ಟ್ರಪತಿಗಳ ಭೇಟಿ ಬಗ್ಗೆ ಚರ್ಚೆ ಮಾಡ್ತೇವೆ ಎಂದಿದ್ದಾರೆ ಪರಂ.
ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಕೂಗು ಕೇಳ್ತಿದ್ದಂತೆ ಸಚಿವ ಜಮೀರ್ ಅಹ್ಮದ್ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ ಸಿಎಂ ಸಿದ್ದರಾಮಯ್ಯ ಟಗರು ಒಂಥರಾ ಹುಲಿ ಇದ್ದಂಗೆ ನಮ್ಮ ಸಿಎಂ. ಸಿದ್ದರಾಮಯ್ಯ ಭಯಪಾಡೋ ಪ್ರಶ್ನೆಯೇ ಇಲ್ಲ ಟಗರು ಗುಟುರು ಹಾಕುತ್ತಲ್ಲಾ ಆ ಥರಾ ನಮ್ಮ ಸಿಎಂ, ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಜಮೀರ್….
ಕಾಂಗ್ರೆಸ್ ನ ಸಿಎಂ ಬದಲಾವಣೆ ವಿಚಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಸಿಎಂ ಟಗರು ,ಹುಲಿ ಇದ್ದ ಹಾಗೇ ಯಾರು ಏನು ಮಾಡಲು ಆಗಲ್ಲ ಅಂತಾ ಜಮೀರ್ ಹೇಳ್ತಾರೆ,
ಯಾಕೆ ಹಾಗಾದರೆ ಮನೆಯಲ್ಲಿ ಸುಮ್ಮನೆ ಕುಳಿತುಬಿಡಲಿ. ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ಭಾವನಾತ್ಮಕ ಬ್ಲಾಕ್ ಮೇಲ್ ತಂತ್ರಗಾರಿಕೆ ನಡಿತಿದೆ. ಒಂದೇ ವರ್ಷದಲ್ಲಿ ಸಿದ್ಧರಾಮಯ್ಯ , ಕಾಂಗ್ರೆಸ್ ಜನಪ್ರಿಯತೆ ನಿಂತು ಹೋಗಿದೆ ಲೋಕಸಭಾ ಚುನಾವಣೆಯಲ್ಲಿ ಜನರು ತೋರಿಸಿದ್ದಾರೆ ಅಂತ ಟಾಂಗ್ ಕೊಟ್ಟಿದ್ದಾರೆ ಜೋಷಿ..
ಪ್ರಾಸಿಕ್ಯೂಷನ್ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಮಿತ್ರರೂ ಯಾಕೆ ಆತಂಕಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಅಂತಿಮ ಘಟ್ಟದಲ್ಲಿದ್ದು ಕಾದು ನೋಡೋಣಾ ಕೋರ್ಟ್ ತೀರ್ಪಿನ ಮೇಲೆ ಸಿಎಂ ಮುಂದುವರಿಕೆ ನಿಂತಿದೆ. ಕಾಂಗ್ರೆಸ್ ನವರು ತಮ್ಮನ್ನ ತಾವು ಉಳಿಸಿಕೊಳ್ಳಲು ಆಧಾರವಿಲ್ಲದ ಆರೋಪ ಮಾಡ್ತಿದ್ದಾರೆ. ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಬಳಸುತ್ತಿರುವ ಟ್ರಿಕ್ಸ್ ಇದು ಅಂತ ಆರೋಪ ಮಾಡಿದ್ದಾರೆ ಬೊಮ್ಮಾಯಿ….
ಒಟ್ನಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ಗೆ ಮಹತ್ವದ ದಿನ ಕೋರ್ಟ್ ನಲ್ಲಿ ಏನಾಗುತ್ತೆ ಅನ್ನೋ ಡವ ಡವದ ಮಧ್ಯೆ ಸಿಎಂ ಟೆಂಪಲ್ ರನ್ ಗೆ ಮುಂದಾಗಿದ್ದಾರೆ. ಈ ಮಧ್ಯೆ ಕೈಪಡೆಯಲ್ಲಿ ಸಿಎಂ ಖುರ್ಚಿಯ ಕಿತ್ತಾಟ ಶುರುವಾಗಿದ್ದು ಸಿಎಂಗಾಧಿ ಮೇಲೆ ಒಬ್ಬೊಬ್ಬರೇ ಟವೆಲ್ ಹಾಕ್ತಿದ್ದಾರೆ. ಪರಮೇಶ್ವರ್, ಡಿಕೆಶಿ, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಸಾಲಿಗೆ ದೇಶಪಾಂಡೆ ಸೇರಿದ್ದಾರೆ ನಾಳಿನ ತೀರ್ಪಿನ ಮೇಲೆ ಸಿಎಂ ರೇಸ್ ಮತ್ತಷ್ಟು ರಂಗೇರಲಿದೆ….