ಉತ್ತರ ಕನ್ನಡ: ಮುಂಬರುವ ಲೋಕಸಭಾ ಚುನಾವಣೆಗೆ ಸಂಸದ ಅನಂತ ಕುಮಾರ ಹೆಗಡೆ ಅವರ ಅನುಭವ ಪಡೆದು ಅಣ್ಣ ತಮ್ಮನಂತೆ ಕೆಲಸ ಮಾಡಲಿದ್ದೇವೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ವರಿಷ್ಠರಿಗೆ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಹೇಳುತ್ತೇನೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಬಲವಾಗಿದೆ.
ಬಿಜೆಪಿಯಲ್ಲಿ ವರಿಷ್ಠರ ನಿರ್ಣಯ ಬಂದಾದ ಮೇಲೆ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ. ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಆರಂಭವಾಗಿದೆ. ಅಭ್ಯರ್ಥಿಯಾಗಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದೇನೆ’ ಎಂದರು. ‘ನರೇಂದ್ರ ಮೋದಿ ಅವರು ಮರಳಿ ಪ್ರಧಾನಿ ಆಗಬೇಕು ಎಂದು ಒಗ್ಗಟ್ಟಾಗಿ ದೇಶ, ರಾಜ್ಯ, ಕ್ಷೇತ್ರದಲ್ಲಿ ಪ್ರತಿಯೊಬ್ಬರು ಕೆಲಸ ಮಾಡಲಿದ್ದಾರೆ.
Cucumber: ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಇಷ್ಟೆಲ್ಲಾ ಲಾಭಗಳಿದ್ಯಾ..? ಇಲ್ಲಿದೆ ಫುಲ್ ಡೀಟೇಲ್ಸ್
40 ವರ್ಷದಿಂದ ರಾಜಕೀಯ ಜೀವನ, ಸಾರ್ವಜನಿಕ ಜೀವನದಲ್ಲಿಇದ್ದೇನೆ. ಜನರಿಗೆ ನನ್ನ ಪರಿಚಯ ಇದೆ. ಇದು ಅಭ್ಯರ್ಥಿಗಳ ನಡುವೆ ಚುನಾವಣೆ ಅಲ್ಲ. ಪಕ್ಷಗಳ ನಡುವೆ ನಡೆಯುವ ಚುನಾವಣೆ. ಕಾಂಗ್ರೆಸ್ ಯಾವ ಗ್ಯಾರಂಟಿಗಳೂ ಜನರಿಗೆ ತಲುಪುತ್ತಿಲ್ಲ. ಅಭಿವೃದ್ಧಿಗೆ ಒಂದು ರೂ. ಹಣ ಬಂದಿಲ್ಲ. ಅಡಳಿತ ಶಿಥಿಲತೆ ಹೆಚ್ಚಾಗಿದೆ. ಜನತೆಗೆ ಕಾಂಗ್ರೆಸ್ ಭ್ರಮೆ ನಿರಸನ ಉಂಟಾಗಿದೆ’ ಎಂದರು.