ಚಾಮರಾಜನಗರ: ಕೇಂದ್ರದಲ್ಲಿ ಕಾಂಗ್ರೆಸ್ ದೂಳಿಪಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಏನ್ ಹೇಳ್ತಾರೆ ಮುಖ್ಯವಲ್ಲ. ರಾಜ್ಯ ಜನ ಏನ್ ಹೇಳ್ತಾರೆ ಅದು ಮುಖ್ಯ. ದೇಶದಲ್ಲಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಅಪೆಕ್ಷೆಯನ್ನ ಇಟ್ಟುಕೊಂಡಿದ್ದಾರೆ. 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ತಾರೆ ಎಂದರು.
Karnataka Weather: ಕರ್ನಾಟಕದ ಹಲವೆಡೆ ಮಳೆಯ ಮುನ್ಸೂಚನೆ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ದೇಶದಲ್ಲಿ ಬಿಜೆಪಿ 200 ಸ್ಥಾನ ಮಾತ್ರ ಪಡೆಯುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಎಷ್ಟೊತ್ತಲ್ಲಿ ಹೇಳಿದ್ರು, ಯಾವ ಟೈಮ್ನಲ್ಲಿ ಹೇಳಿದ್ರು? ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಹಾತಶೆಯಿಂದ ಹೇಳುತ್ತಿದ್ದಾರೆ ಅಷ್ಟೇ. ಯಾವಗಾ ಕಾಂಗ್ರೆಸ್ ಪಕ್ಷ 400 ಸ್ಥಾನ ಇಟ್ಟುಕೊಂಡು ಅಧಿಕಾರ ನಡೆಸಿ ಅಧಿಕಾರದಿಂದ ಕೆಳಗಡೆ ಇಳಿದಿದ್ದಾರೆ? 30 ಸ್ಥಾನ ಸಹ ತಗೆದುಕೊಳ್ಳಲು ಆಗದಿರೋ ಧಾರುಣ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ದೂಳಿಪಟವಾಗಿದೆ ಎಂದು ವಾಗ್ದಾಳಿ ಮಾಡಿದರು.
ಸುಮಲತ ಬಿಜೆಪಿ ಸೇರ್ಪಡೆಯಾಗ್ತೀನಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ತುಂಬಾ ಒಳ್ಳೆಯ ಬೆಳವಣಿಗೆ ಇದು. ರಾಜ್ಯಕ್ಕೆ ಸಂತೋಷವಾಗಿದೆ. ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಗೆಲಲ್ಲಿದ್ದಾರೆ ಎಂದರು.