ಬೆಂಗಳೂರು:- ಬೆಂಗಳೂರು ಕಂಬಳಕ್ಕೆ ಕೊಟ್ಟಿರೋ 1 ಕೋಟಿ ವಾಪಸ್​ಗೆ ಕಾಂಗ್ರೆಸ್​ ಹೈಕಮಾಂಡ್ ಸೂಚನೆ ನೀಡಿದೆ.

ಕಂಬಳ ನಡೆಯೋದೇ ಅನುಮಾನವಾಗಿದ್ದು, ಹೀಗಾಗಿ ಹಣ ವಾಪಸ್ ಕೊಡುವಂತೆ ಸೂಚಿಸಿದೆ. MLA ಅಶೋಕ್​ ರೈ ಸಸ್ಪೆಂಡ್ ಮಾಡಿ, ಸಿಎಂ, ಡಿಸಿಎಂ ಯಾರೂ ಕಂಬಳದ ವೇದಿಕೆ ಹತ್ತಬಾರದು ಎಂದು ಸುರ್ಜೇವಾಲ ಖಡಕ್ ಸೂಚನೆ ನೀಡಿದ್ದಾರೆ.

ಪಕ್ಷದ ವಿರುದ್ಧ ಬೀದಿ-ಬೀದಿಯಲ್ಲಿ ಜನ ಆಕ್ರೋಶ ಹೊರ ಹಾಕ್ತಿದ್ದಾರೆ, ಲೈಂಗಿಕ ಕಿರುಕುಳ ಆರೋಪ ಹೊತ್ತವರನ್ನು ಆಹ್ವಾನಿಸೋದು ಅಂದ್ರೆ ಏನು. ಕಾಂಗ್ರೆಸ್​ ಶಾಸಕರೇ ಇಂಥವರನ್ನು ಆಹ್ವಾನಿಸಿದ್ದು ಎಷ್ಟು ಸರಿ, ಬ್ರಿಜ್​ ಭೂಷಣ್​ ಆಹ್ವಾನಿಸಿದ್ದಕ್ಕೆ ಜನ ಹಾದಿ-ಬೀದಿಯಲ್ಲಿ ನಗ್ತಿದ್ದಾರೆ, ಕಾಂಗ್ರೆಸ್​ ಮಾನ-ಮರ್ಯಾದೆ ಹರಾಜು ಆಗ್ತಿದೆ. ಕಾಂಗ್ರೆಸ್​ ಶಾಸಕರೇ ಇಂಥಾ ಕೆಲಸಕ್ಕೆ ಕೈ ಹಾಕಬಹುದಾ..? ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೆವಾಲಾ ಫುಲ್​​ ಗರಂ ಆಗಿದ್ದಾರೆ.

Share.