ವಿಜಯಪುರ:- ಪಠ್ಯಪುಸ್ತಕ ಪರಿಷ್ಕೃರಣೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದು ಎಸ್ ಇ ಪಿ ಮಾಡ್ತಿದ್ದಾರೆ. ಮಧು ಬಂಗಾರಪ್ಪನಿಗೆ ನಾನು ಹೇಳೋದು ಇಷ್ಟೇ ನಿಮ್ಮ ಸರ್ಕಾರ ಬಹಳ ದಿನ ಇರಲ್ಲ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳುವುದು ಖಚಿತ. ಮತ್ತೆ ರಾಜ್ಯದಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡ್ತೇವೆ. ಹಿಂದೂ ವಿರೋಧಿ ಯಾವುದೇ ಪಠ್ಯಕ್ರಮದಲ್ಲಿ ಸೇರಿಸಿದ್ರೂ ನಾವೆಲ್ಲಾ ತೆಗೆದು ಹಾಕಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡ್ತೀವಿ.
ಮಧು ಬಂಗಾರಪ್ಪ ದುಡುಕು ಬಾರದು ಎಂದು ಶಾಸಕ ಯತ್ನಾಳ ಸಲಹೆ ಕೊಟ್ಟಿದ್ದಾರೆ.