ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ನಲ್ಲಿ ಬಂಧನಕ್ಕೆ ವಾರೆಂಟ್ ಮಾಡಿದ್ದು ದ್ವೇಷದ ರಾಜಕಾರಣ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ದ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಆದರೆ ಇದೀಗ ಅವರ ಪರವಾಗಿ ಹೈಕೋರ್ಟ್ ಸೂಕ್ತ ಆದೇಶ ಕೊಟ್ಟಿದೆ.
ಆದರೆ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವುದು ಪಕ್ಕಾ ದ್ವೇಷದ ರಾಜಕಾರಣ ಎಂದರು. ಡಿಕೆಶಿ ಹೇಳಿದ್ದಾರೆ ರಾಹುಲ್ ಗಾಂಧಿ ಮೇಕೆ ಕೇಸ್ ಹಾಕ್ತೀರಾ ಅಂತಾ. ಆಗ ಸ್ಪಷ್ಟವಾಗಿ ಗೊತ್ತಾಯಿತು ಅಲ್ವಾ? ಯಾರು ದ್ವೇಷದ ರಾಜಕಾರಣ ಮಾಡಿದ್ದಾರೆ ಎಂಬುವುದು. ಗೃಹ ಸಚಿವರೇ ಹೇಳಿದ್ದಾರೆ ಅವರು ಮಾನಸೀಕ ಅಸ್ವಸ್ಥತೆ ಎಂದು. 50 ಕೇಸ್ ಐಪಿಎಸ್ ಐಎಎಸ್ ಅಧಿಕಾರಿಗಳ ಮೇಲೆ ಕೇಸ್ ಹಾಕಿದ್ದಾರೆ ಎಂದು. ಹೀಗಾಗಿ ಸರ್ಕಾರದ ನಡೆಯನ್ನ ನಾನು ಖಂಡಿಸುತ್ತೇನೆ ಎಂದರು.
Father’s Day 2024: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲವೂ ಗ್ಯಾರಂಟಿ ಅಂತಾ ಹೇಳಿದ್ದರು. ಆದರೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಸ್ವತಃ ಸಿಎಂ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಸಾವಾಗಿದೆ. ತುಮಕೂರಿನಲ್ಲಿ 7 ಜನ ಸಾವಾಗಿದೆ. ನಾನು ನೀರನ್ನು ಪರಿಶೀಲನೆ ಮಾಡಿದ್ದೀರಾ ಎಂದು ಜಿಲ್ಲಾಧಿಕಾರಿ ಬಳಿ ಕೇಳಿದ್ದೆ. ಅವರು ಕಲುಷಿತ ನೀರು ಅಂದ್ರು. ಅಲ್ಲ ರೀ ಕಲುಷಿತ ನೀರು ಅಂದ್ರೆ, ಕಿಡ್ನಿ ಸಮಸ್ಯೆ ಇದೆ ಅವರಿಗೆ ಅಂತಾ ಹೇಗೆ ಹೇಳ್ತೀರಿ. ಇದು ಇಡೀ ರಾಜ್ಯದಲ್ಲೂ ನೀರಿನ ಸಮಸ್ಯೆ ಇದೆ. ನಿಮ್ಮ ಸರ್ಕಾರ ಪಾಪರ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.