ಕಲಬುರಗಿ:- ಆರ್ ಸಿಬಿ ತಂಡದ ಮಿಂಚಿನ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಗೆ ಇವತ್ತು ತವರೂರು ಕಲಬುರಗಿಯಲ್ಲಿ ಜಿಲ್ಲಾಡಳಿತ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.ಡಿಸಿ ಕಚೇರಿಯ ಸಭಾಂಗಣದಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರುನಮ್ ಮೈಸೂರು ಪೇಟ ತೊಡಿಸಿ ಶಾಲಾ ಹೊದಿಸಿ ಸನ್ಮಾಸಿದ್ರು..
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೇಯಾಂಕಾ ನನಗೆ ಚಿಕ್ಕಂದಿನಿಂದಲೂ ಸಾಧನೆ ಮಾಡಬೇಕು ನಮ್ಮೂರಿಗೆ ಕೀರ್ತಿ ತರಬೇಕು ಅನ್ನೋ ಆಸೆಯಿತ್ತು..ಆ ಕನಸು ನಿಮ್ಮೆಲ್ಲರ ಆಶೀರ್ವಾದದಿಂದ ನೆರವೇರಿದೆ.ನಿಮಗೂ ಕೂಡ ಹಾರೈಸುವೆ ನೀವೂ ಸಾಧನೆ ಮಾಡಿ ಅಂತ ಕಾಲೇಜು ಯುವಕ ಯುವತಿಯರಿಗೆ ಸಲಹೆ ಕೊಟ್ರು…