ಹೊಸಕೋಟೆ: ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದ ನೂತನ ಸಂಸದ ರಾದ ಡಾ ಕೆ ಸುಧಾಕರ್ ಗೆ ಅಭಿನಂದನೆ ಸಮಾರಂಭ. ಭರ್ಜರಿ ಗೆಲುವಿನೊಂದಿಗೆ ನಗು ಬೀರಿದ್ದ ಡಾ ಕೆ ಸುಧಾಕರ್. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಡಾ ಕೆ ಸುಧಾಕರ್ ಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
Black Pepper Tea: ಕಾಳು ಮೆಣಸಿನ ಚಹಾ ಕುಡಿದಿದ್ದೀರಾ..? ಇದರ ಸೇವನೆಯಿಂದ ಸಿಗಲಿದೆ ಹಲವು ಪ್ರಯೊಜನಗಳು
ಹೊಸಕೋಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸಮಾರಂಭ ಆಯೋಜನೆ.ಇದೇ ಸಂದರ್ಭದಲ್ಲಿ ಗೆಲುವಿಗೆ ಸಹಕರಿಸಿ ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು 10 ರಿಂದ 15 ಸಾವಿರ ಮತಗಳ ಲೀಡ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಮತದಾರರು ಆವರ ನಿರೀಕ್ಷೆ ಎಲ್ಲಾ ಹುಸಿಗೊಳಿಸಿ ಉತ್ತಮ ಮತದಾನ ಮಾಡಿದ್ದಾರೆ ಎಂದು ನೂತನ ಸಂಸದ ಸುಧಾಕರ್ ತಿಳಿಸಿದ್ದಾರೆ.