ಚಿತ್ರದುರ್ಗ:- ಕೋಮುವಾದಿ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತೆ ಎಂಬ ವಿಚಾರವಾಗಿ ಹಿರಿಯೂರು ಪಟ್ಟಣದಲ್ಲಿ ಮಾತನಾಡಿದ ಅವರು, ಮೊದಲು ನರೇಂದ್ರ ಮೋದಿ ಪ್ರಧಾನಿ ಆಗಲಿ. ಮೋದಿ ಪ್ರಧಾನಿ ಆಗಿ ಮೊದಲು ಪ್ರಮಾಣ ವಚನ ಸ್ವೀಕರಿಸಲಿ. ಆಮೇಲೆ ದೇಶದ ಸ್ಥಿತಿಗತಿ ನೋಡಿಕೊಂಡು ನೋಡೋಣ. ಮುಂದೆ ಏನಲ್ಲ ಮಾಡ್ತೀವಿ ಅದು ನಿಮ್ಮ ಮುಂದೆ ನಡೆಯುತ್ತೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ತುಂಬಾ ಚೆನ್ನಾಗಿ ಇದೆ. ಕಲ್ಯಾಣ ಕರ್ನಾಟಕದ ಕಡೆ ಹೆಚ್ಚು ಬಿಜೆಪಿ ಅಲೆ ಇದೆ ಎಂದರು.
ಚಿತ್ರದುರ್ಗದಲ್ಲಿ ಕಾರಜೋಳ ಒಳ್ಳೆ ಬಹುಮತದಿಂದ ಗೆಲ್ಲುತ್ತಾರೆ. ದೇಶದಲ್ಲಿ ಪ್ರಧಾನಿ ಅಂದ್ರೆ ಮೋದಿ ಎಂಬ ಸಂಕಲ್ಪ ಇದೆ. ಬಳ್ಳಾರಿ ಕ್ಷೇತ್ರದಲ್ಲಿ ಈ ಹಿಂದೆ ರಾಮುಲು ಹೆಚ್ಚಿನ ಅಂತರದಿಂದ ಗೆದ್ದಿದ್ದರು. ಈ ಬಾರಿ ಕನಿಷ್ಠ 2 ಲಕ್ಷ ಅಂತರದಿಂದ ರಾಮುಲು ಗೆಲ್ಲುತ್ತಾರೆ. ಈಗಾಗಲೇ ಶ್ರೀರಾಮುಲು ಗೆದ್ದಿದ್ದಾರೆ ಎಂಬ ಜನರಲ್ಲಿ ವಿಶ್ವಾಸ ಇದೆ ಎಂದರು.
ಇನ್ನೂ ಇದೇ ವೇಳೆ ಕೋಮುವಾದಿ ಪಕ್ಷಕ್ಕೆ ಮತ ಹಾಕಬೇಡಿ ಎಂಬ ಕೆ. ಹೆಚ್ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೋಮುವಾದಿ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಕೋಮುವಾದಿ ಮಾಡ್ತಾ ಇರೋದು ಕಾಂಗ್ರೆಸ್ ಪಕ್ಷದವರು. ಮೋದಿ ಹತ್ತು ವರ್ಷ ಅಭಿವೃದ್ದಿ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಅಷ್ಟೇ. ಶ್ರೀರಾಮ ದೇಶಕ್ಕೆ ಬೇಕಾಗಿದ್ದಾನೆ, ನಾವು ಅಭಿವೃದ್ದಿ ಮುಂದಿಟ್ಟುಕೊಂಡು ಹೋಗ್ತಿದ್ದೇವೆ ಎಂದರು.