ಬೆಂಗಳೂರು:-ಆಕೆ 40-45ರ ವಯಸ್ಸಿನಾಕೆ ನಿನ್ನೆ ನವರಂಗ್ ಥಿಯೆರಟರ್ ನಲ್ಲಿ ತಮಿಳು ಸಿನಿಮಾ ನೋಡಿ ಮೆಜೆಸ್ಟಿಕ್ ಬಸ್ ಹತ್ತಿದ್ಳು.. ಮಲ್ಲೇಶ್ವರಂಗೆ ಟಿಕೆಟ್ ತಗೊಂಡ್ ಹೋಗಿದ್ದಾಕೆ ಏಕಾ ಏಕಿ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ..
ಅದು ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್ ನಲ್ಲಿರೋ ನಾಲ್ಕು ಅಂತಸ್ಥಿನ ಅಪಾರ್ಟ್ಮೆಂಟ್.. ಬೆಳಗ್ಗೆ 7ವರೆಗೆ ಎದ್ದಿದ್ದ ಅಪಾರ್ಟ್ಮೆಂಟ್ ನಿವಾಸಿಯೊಬ್ಬ ಬಾಲ್ಕನಿಗೆ ಬಂದಿದ್ದ.. ಮೆಟ್ಟಿಲು ನೋಡಿದವನೇ ಶಾಕ್ ಆಗಿದ್ದ.. ಯಾಕಂದ್ರೆ ಅಲ್ಲೊಂದು ಮಹಿಳೆ ಶವ ನೇತಾಡ್ತಿತ್ತು.. ಬೇರೆ ಎಲ್ಲೋ ವಾಸ ಮಾಡ್ತಿದ್ದ 45 ವರ್ಷದ ಅಪರಿಚಿತ ಮಹಿಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ..
ಅಂದ್ಹಾಗೆ ಇವತ್ತು ಬೆಳಗ್ಗೆ 7.30ಕ್ಕೆ ಗೊತ್ತಾಗಿರೋ ವಿಚಾರ ಇದು.. ಮಲ್ಲೇಶ್ವರಂ ನ ಶ್ರೀಸಾಯಿ ಅಪಾರ್ಟ್ಮೆಂಟ್ ನಿವಾಸಿ ಎನ್ ಕೆ ರಾವ್ ರೂಮ್ ನಲ್ಲಿ ಮಲಗಿದ್ದಾಗ ಬೆಳ್ ಬೆಳಗ್ಗೆ ನಾಯಿ ಬೊಗಳಿತ್ತು ಅಂತಾ ಹೊರ ಬಂದಿದ್ದ ಬಾಲ್ಕನಿಗೆ ಬಂದಿದ್ದಾತನೇ ಅಲ್ಲಿ ನೇತಾಡ್ತಿದ್ದ ಶವ ನೋಡಿ ಶಾಕ್ ಆಗಿದ್ದಾನೆ.. ಮಾಹಿತಿ ಬಂದ ಕೂಡಲೇ ಮಲ್ಲೇಶ್ವರಂ ಪೊಲೀಸ್ ರು ಬಂದು ಪರಿಶೀಲನೆ ಮಾಡಿದಾಗ ಆಕೆ ಅಪಾರ್ಟ್ಮೆಂಟ್ ನಿವಾಸಿ ಅಲ್ಲ ಅನ್ನೋದು ಗೊತ್ತಾಗಿದೆ..
ಇನ್ನು ಸ್ಪಾಟ್ ಇನ್ಸಪೆಕ್ಟ್ ಮಾಡಿದ್ದ ಮಲ್ಲೇಶ್ವರಂ ಪೊಲೀಸರಿಗೆ ಆಕೆ ಯಾರು ಅನ್ನೋದು ಗೊತ್ತಾಗಿಲ್ಲ.. ಪರಿಶೀಲನೆ ವೇಳೆ ಆಕೆ ಬಳಿ ಒಂದು ಬಿಎಮ್ ಟಿಸಿ ಬಸ್ ಟಿಕೆಟ್ , ತಮಿಳು ರಾಯನ್ ಸಿನಿಮಾ ಟಿಕೆಟ್ ಹಾಗೂ ಒಂದು ಬ್ಯಾಗ್ ಸಿಕ್ಕಿದೆ.. ಟಿಕೆಟ್ ಚೆಕ್ ಮಾಡಿದಾಗ ನಿನ್ನೆ ನವರಂಗ್ ಥಿಯೇಟರ್ ನಲ್ಲಿ ರಾಯನ್ ಸಿನಿಮಾ ನೋಡಿದ್ದಾಕೆ ಬೆಳಗ್ಗೆ 6.15ರ ಸುಮಾರಿಗೆ ಮೆಜೆಸ್ಟಿಕ್ ನಿಂದ ಇಲ್ಲಿಗೆ ಅಂದ್ರೆ ಮಲ್ಲೇಶ್ವರಂ 15ನೇ ಕ್ರಾಸ್ ಬಿಎಮ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾಳೆ ಅಂತಾ ಗೊತ್ತಾಗಿದೆ.. ಬಸ್ ಇಳಿದಾಕೆ ಸೀದಾ ಈ ಅಪಾರ್ಟ್ಮೆಂಟ್ ಹತ್ತಿ ನೇಣಿಗೆ ಶರಣಾಗಿದ್ದಾಳೆ ಅಂತಾ ತನಿಖೆ ವೇಳೆ ಗೊತ್ತಾಗಿದೆ..
ದ್ಯ ಮೇಲುನೋಟಕ್ಕೆ ಇದೊಂದು ಆತ್ಮಹತ್ಯೆ ಅಂತಾ ಗೊತ್ತಾಗಿದೆ.. ಅನ್ ನ್ಯಾಚುರಲ್ ಡೆತ್ ಅಂತಾ ಕೇಸ್ ಮಾಡಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.. ಆಕೆ ಒಬ್ಬಳೇ ಸಿನಿಮಾ ನೋಡಿದ್ಳಾ..? ಅಪಾರ್ಟ್ಮೆಂಟ್ ಗೆ ಬಂದಿದ್ಳಾ..? ಅಥವಾ ಬೇರೆ ಯಾರಾದ್ರು ಜೊತೆಗೆ ಬಂದಿದ್ರಾ..? ಇದೇ ಅಪಾರ್ಟ್ಮೆಂಟ್ ಗೆ ಯಾಕೆ ಬಂದ್ಳು..? ಇದು ಆತ್ಮಹತ್ಯೆ ನಾ ಅಥವಾ ಬೇರೆ ಏನಾದ್ರು ವಿಚಾರ ಇದ್ಯಾ ಅನ್ನೋದು ತನಿಖೆ ನಂತರವೇ ಗೊತ್ತಾಗಬೇಕು.