ಗದಗ:- ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ಜೋರಾಗಿದೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹಾಲಿನಿಂದ ಹಿಡಿದು ಎಲ್ಲಾ ದರ ಹೆಚ್ಚಾಗಿದೆ ಅಂದ್ರೆ 40%ಕ್ಕೆ ಆಗಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ 69-70% ಕಮೀಷನ್ ನಡೆದಿದೆ. ಒಂದು ಅಭಿವೃದ್ಧಿ ಕೆಲಸ ಇಲ್ಲ, ಎಲ್ಲಿ ಹೊಯ್ತು ಹಣ ಎಂದು ಪ್ರಶ್ನಿಸಿದ್ದಾರೆ
ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್!?.. ಪದಗ್ರಹಣಕ್ಕೆ ಡೇಟ್ ಫಿಕ್ಸ್!
ಎರಡ್ಮೂರು ಸಾವಿರ ಕೋಟಿ ರೂ. ಹೆಚ್ಎಸ್ಟಿಪಿ ಯೋಜನೆಗೆ ಬೆಳಗಾವಿ ಜಿಲ್ಲೆಯಲ್ಲಿ ಟೆಂಡರ್ ಆಗಿದೆ. ಆದರೆ 10 ಎಕರೆ ಜಮೀನು ಕೂಡ ಭೂಸ್ವಾಧೀನ ಆಗಿಲ್ಲ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಪ್ರಗತಿ ಪರಿಶೀಲನೆ ಮಾಡುವಾಗ ಬಯಲಾಗಿದೆ. ಏಜನ್ಸಿ ಫಿಕ್ಸ್ ಆಗಿದೆ ಅಂದಂರೆ ಇದರ ಉದ್ದೇಶ ಏನೂ. ಮುಂದೆ ನಡೆಯುವ ಅಧಿವೇಶನದಲ್ಲಿ ಪ್ರಶ್ನೆ ಕೇಳ್ತೀವಿ ಉತ್ತರ ಕೊಡಬೇಕು ಎಂದಿದ್ದಾರೆ.
ಟೆಂಡರ್ ಕರೆಯುವ ಉದ್ದೇಶ ಏಳು ಕೋಟಿ. ನರಗುಂದ ಮಾಜಿ ಶಾಸಕ ಬಿಆರ್ ಯಾವಗಲ್ 3 ಕೋಟಿ ರೂ. ಇವ್ರದ್ಧು ಏಳು ಕೋಟಿ ಅಂತ ವ್ಯಂಗ್ಯವಾಡಿದ್ದಾರೆ. ಗುದ್ಲಿ, ಸಲಿಕೆ ತುಕ್ಕು ಹಿಡಿದಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಭೂಮಿ ಪೂಜೆ ಮಾಡಿ ಕೈ ನೋವಾಗುತ್ತಿತ್ತು ಎಂದು ಸಚಿವ ಎಂ ಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಉಳಿದ ರಾಜ್ಯಕ್ಕಿಂತ ಕಡಿಮೆ ಇದೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಲಿಂಗೈಕ್ಯ ತೋಟದಾರ್ಯ ಸಿದ್ಧಲಿಂಗ ಶ್ರೀಗಳ ಮಾತು ಹೇಳುವ ಮೂಲಕ ಎಂಬಿ ಪಾಟೀಲ್ಗೆ ಟಾಂಗ್ ನೀಡಿದ್ದಾರೆ.