ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಜೋರಾಗಿದೆ.. ಎಲೆಕ್ಷನ್ ಸಮರಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳಿಂದ ಪ್ರಚಾರ ಬಿರುಸುಗೊಂಡಿದ್ದು, ನಾನಾ ಪಕ್ಷಗಳ ಕಾರ್ಯಕರ್ತರು ಮತದಾರರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಆದರೆ, ಪ್ರತಿವರ್ಷ ನಾನಾ ಕಾರಣಗಳಿಂದ ನೀರಿಕ್ಷೆಯಷ್ಟು ಮತದಾನ ಮಾತ್ರ ಆಗ್ತೀಲ್ಲ ಹೀಗಾಗಿ ಚುನಾವಣಾ ಆಯೋಗ ಈ ವರ್ಷ ಮತದಾನ ಪ್ರಮಾಣ ಏರಿಕೆಗೆ ಹೊಸ ಪ್ಲಾನ್ ಮಾಡಿದೆ
ಈಗಾಗಲೆ ಎಲ್ಲ ಪಕ್ಷಗಳಿಂದ ಬಹುತೇಕ ಟಿಕೇಟ್ ಅನೌನ್ಸ್ ಆಗಿದ್ದು ಬಿ ಪಾರ್ಮ್ ಕೂಡಾ ಪಡೆದುಕೊಂಡಿದ್ದಾರೆ. ಸಕಲ ರೀತಿಯಲ್ಲೂ ರಾಜಕೀಯ ನಾಯಕರು ಚುನಾವಣೆ ಆಖಾಡಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣಾ ಆಯೋಗ ಮತ ಸಮರಕ್ಕೆ ಸಕಲ ಸಿದ್ಧತೆ ಶುರು ಮಾಡಿದೆ.. ಈ ವರ್ಷ ಮತದನಾ ಪ್ರಮಾಣ ಏರಿಕೆಗೆ ಆಯೋಗ ಹೊಸ ಹೊಸ ಪ್ಲಾನ್ ಮಾಡ್ತೀದ್ದು ಈ ವರ್ಷ ಮತದಾರರ ಗುರುತಿನ ಚೀಟಿಗೆ ಕಲರ್ ಪುಲ್ ಟಚ್ ಕೊಟ್ಟಿದೆ. ದೇಶದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಕರ್ನಾಟಕ ಚುನಾವಣಾ ಆಯೋಗ ಮುಂದಾಗಿದೆ.
2nd Pu Result Date: ದ್ವಿತೀಯ ಪಿಯು ಫಲಿತಾಂಶಕ್ಕೆ ಮುಹೂರ್ತ ಫಿಕ್ಸ್!
ಈ ಬಾರಿ ಮತದಾರರ ಗುರುತಿನ ಚೀಟಿಯ ಹಿಂದೆ ಬಾರ್ ಕೋಡ್ ಅಳವಡಿಸಲು ಆಯೋಗ ಮುಂದಾಗಿದೆ.. ಪ್ರತಿಯೊಬ್ಬ ಮತದಾರನ ಗುರುತಿನ ಚೀಟಿಯ ಹಿಂದೆ ಬಾರ್ ಕೋಡ್ ಇರಲಿದ್ದು ಈ ಬಾರ್ ಕೋಡ್ ಮತದಾರರನ ಮತದಾನ ಮಾಡುವ ಮತಗಟ್ಟೆಯ ಸಂಪೂರ್ಣ ವಿಳಾಸದ ಮಾಹಿತಿ ನೀಡಲಿದೆ.. ಮೊಬೈಲ್ನಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು ಮತಗಟ್ಟೆಯ ಮ್ಯಾಪ್ ಬರಲಿದೆ.. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಈ ಪ್ರಯತ್ನಕ್ಕೆ ಆಯೋಗ ಕೈಹಾಕಿದೆ.. ಈ ಮೂಲಕ ಮತದಾರ ಯಾವುದೇ ಕಾರಣಕ್ಕೂ ಮತಗಟ್ಟೆಯಿಂದ ಹಿಂದೆ ಉಳಿಯಬಾರದು ಯಾವುದೇ ಮಾಹಿತಿ ಇಲ್ಲದೆ ಮತಗಟ್ಟೆ ಮಾಹಿತಿ ಲಭ್ಯವಾಗದೆ ಮತದಾನದ ದಿನ ಮತ ಹಾಕದೆ ಹಿಂದೆ ಉಳಿಯುವು ಪ್ರತಯತ್ನವಾಗದಿರಲಿ ಪ್ರತಿಯೊಬ್ಬರು ಸುಲಭವಾಗಿ ತಮ್ಮ ತಮ್ಮ ಮತಗಟ್ಟೆಗೆ ಬಂದು ಮತದಾನ ಮಾಡುವ ಉದ್ದೇಶದಿಂದ ಮತದಾನದ ಪ್ರಮಾಣ ಏರಿಕೆ ಮಾಡುವ ಉದ್ದೇಶದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಹತ್ತು ಜಿಲ್ಲೆಗಳಲ್ಲಿ ಆಯೋಗ ದೇಶದಲ್ಲಿಯೇ ಮೊದಲ ಬಾರಿಗೆ ಈ ಪ್ರಯತ್ನಕ್ಕೆ ಮುಂದಾಗಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಆದರೆ, ಮತದಾರ ಮಾತ್ರ ಮತಗಟ್ಟೆ ಬಂದು ಹಕ್ಕು ಚಲಾಯಿಸಲು ನಿರ್ಲಕ್ಷ್ಯ ವಹಿಸುತಿದ್ದಾನೆ ಅಲ್ಲದೆ ನಾನಾ ಕಾರಣಗಳಿಂದ ಮತಗಟ್ಟೆಗೆ ಬರಲು ಹಿಂದೇಟು ಹಾಕ್ತೀದ್ದಾನೆ ಹೀಗಾಗಿ ಆಯೋಗ ಮತದಾರರಿಗೆ ಅನಕೂಲ ಕಲ್ಪಿಸಿ ಮತಗಟ್ಟೆಗೆ ಕರೆ ತಂದುಮತದಾನ ಮಾಡಲು ಈ ಬಾರ್ ಕೋಡ್ ಪ್ಲಾನ್ ಮೊರೆ ಹೋಗಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಅಂತಾ ಕಾದು ನೋಡಬೇಕಿದೆ..