ಹುಬ್ಬಳ್ಳಿ: ಸ್ವಜನ ಪಕ್ಷಪಾತಿ, ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ ಸಿದ್ಧರಾಮಯ್ಯನವರಿಗೆ ತಾವು ಮಾಡಿದ ತಪ್ಪಿಗಾಗಿ ಇವತ್ತು ತಕ್ಕ ಶಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು. ಇದು ಅವರ ರಾಜಕೀಯ ಜೀವನದ ಕೊನೆಯ ಮೊಳೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೈಕೋರ್ಟ್ ಜಡ್ಜಮೆಂಟ್ ಇದೇ ರೀತಿ ಬರುತ್ತದೇ ಎಂದು ರಾಜ್ಯದ ಜನರು ನಿರೀಕ್ಷೆ ಮಾಡಿದ್ದರು. ಅದೇ ರೀತಿಯಲ್ಲಿ ಬಂದಿದೆ. ಈ ನಿಟ್ಟಿನಲ್ಲಿ ಬಹುದೊಡ್ಡ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಹೊಸ ಮುಖ್ಯಮಂತ್ರಿ ಶೋಧನೆಗೆ ಕಾಲಾವಕಾಶ ತೆಗೆದುಕೊಳ್ಳಲಿ. ಆದರೆ ಕೂಡಲೇ ರಾಜೀನಾಮೆ ಕೊಟ್ಟು ಕೋರ್ಟ್ ಮುಂದೆ ಹೋಗಬೇಕು ಎಂದು ಆಗ್ರಹಿಸಿದರು.
ರಾತ್ರಿ ಬಟ್ಟೆಯಿಲ್ಲದೇ ಮಲಗಿದ್ರೆ ಏನಾಗುತ್ತೆ..? ಇಲ್ಲಿದೆ ನಿಮಗೆ ಗೊತ್ತಿಲ್ಲದ ರೋಚಕ ಸತ್ಯಗಳು
ಇನ್ನೂ ಈ ಹಿಂದೆಯೇ ನಾನು ಹೇಳಿದ್ದೇ ಮುಡಾ ಹಗರಣ ಇದು ಸಿದ್ಧರಾಮಯ್ಯನವರ ರಾಜಕೀಯ ಇತಿಹಾಸದ ಕೊನೆಯ ಮೊಳೆ ಎಂದು ಈಗ ಕೂಡ ಹೇಳುತ್ತಿದ್ದೇನೆ. ಈ ಪ್ರಕರಣ ಸಿದ್ಧರಾಮಯ್ಯನವರ ರಾಜಕೀಯ ಜೀವನದ ಕೊನೆಯ ಅಧ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.