ಧಾರವಾಡ: ಪಟ್ಟಣದ ಸ್ವಚ್ಚತಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರು ಅವರ ಆರೋಗ್ಯದ ದೃಷ್ಟಿಯಿಂದ ಕೊಡುವ ಅಗತ್ಯ ಸೌಕರ್ಯ ಇಲ್ಲದೇ ಇರುವುದು ಕಂಡುಬಂದಿತು. ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಸ್ಪಷ್ಟವಾದ ಆದೇಶವನ್ನ ಇಲ್ಲಿ ಗಾಳಿಗೆ ತೋರಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕ ಸಿಬ್ಬಂದಿಗಳಿಗೆ ಪ್ರತಿನಿತ್ಯ ಬಳಸಲಾಗುವ ಕೆಲಸ ಕಾರ್ಯಗಳಿಗೆ ಶೂ, ಸಿಬ್ಬಂದಿ ಯೂನಿಫಾರ್ಮ್, ಹ್ಯಾಂಡ್ ಗ್ಲೋಸ್, ಪೌರಕಾರ್ಮಿಕ ಸಿಬ್ಬಂದಿಯ ಐಡಿ ಕಾರ್ಡ್ ಇಲ್ಲದಿರುವುದು ಕಂಡುಬಂದಿದೆ.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸರಿಯಾದ ಪೌರಕಾರ್ಮಿಕ ಸಿಬ್ಬಂದಿಗಳಿಗೆ ರೆಸ್ಟ್ ರೂಮ್ ಇಲ್ಲದಿರುವುದು ಹಾಗೂ ವೇತನ ವಿಳಂಬ, ಪ್ರತಿನಿತ್ಯ ದಿನಚರಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪೌರಕಾರ್ಮಿಕ ಸಿಬ್ಬಂದಿಗಳು ಪಟ್ಟಣ್ಯಾದ್ಯಂತ ಕೆಲಸ ನಿರ್ವಹಿಸಬೇಕು ಪ್ರತಿನಿತ್ಯ ಬೆಳಗ್ಗೆ ನೀಡುವ ಒಳ್ಳೆಯ ಉಪಹಾರ ಒದಗಿಸಲು ಈಗ ಮುಂದಾಗಬೇಕಾಗಿದೆ.
Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಸಪಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಭೀಮರಾವ್ ಸವಣೂರು ಹಾಗೂ ರೇಣುಕಪ್ಪ ಕೆಲೂರು ಪಟ್ಟಣ ಪಂಚಾಯತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಆಯೋಗದ ಸದಸ್ಯರ ಗಮನಕ್ಕೆ ತರಬೇಕು ಪ್ರತಿ ತಿಂಗಳ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಯ ನಡೆಯುತ್ತದೆ ಪೌರಕಾರ್ಮಿಕರ ಕುಂದು ಕೊರತೆಗಳನ್ನು ಮಾಹಿತಿ ಸರಿಯಾಗಿ ಒದಗಿಸಿ ಎಂದು ಪೌರಕಾರ್ಮಿಕ ಸಿಬ್ಬಂದಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಪಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಜಿಲ್ಲಾ ಸದಸ್ಯರಾದ ರೇಣುಕಪ್ಪ ಕೆಲೂರು,ಭೀಮರಾವ್ ಸವಣೂರು,ಸಮಾಜ ಕಲ್ಯಾಣ ಅಧಿಕಾರಿಗಳಾದ ಯೋಗಪ್ಪನವರ್, ತಾಲೂಕು ಕಾರ್ಮಿಕ ನಿರೀಕ್ಷಕರಾದ ಲತಾ ಟಿಎಸ್, ಪಟ್ಟಣ ಪಂಚಾಯತಿ ಅಧಿಕಾರಿ ವಿಜಿ ಅಂಗಡಿ, ಪ್ರಿಯಾಂಕ ಕುರಡಿಕೆರಿ, ಪಟ್ಟಣ ಪಂಚಾಯತಿ ಪೌರ ಸಿಬ್ಬಂದಿ ಇದ್ದರು.