ಬೀದರ್:- ವೇಗವಾಗಿ ಬಂದ ಕಾರು ಬೈಕ್ ಗೆ ಗುದ್ದಿದ ವೇಗಕ್ಕೆ ಹತ್ತು ಅಡಿ ಎತ್ತರಕ್ಕೆ ಹಾರಿ ಬೈಕ್ ಸವಾರರು ಬಿದ್ದಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಸ್ ಬಳಿ ಜರುಗಿದೆ.
Gadaga: ಮಳೆ ಬೆಳೆ ಸಂಪಾಗಲೆಂದು ಗೋವು ಪೂಜೆ, 1008 ಮೋದಕಗಳೊಂದಿಗೆ ಗಣೇಶ ಪೂಜೆ!
ಈ ಭಯಾನಕ ದೃಶ್ಯ ಬಂದು ಕ್ಷಣ ಮೈ ನಡುಗಿಸುವಂತಿದೆ.
NH-65 ಮುಂಬೈ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಣಾ ಕ್ರಾಸ್ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಉಡಬಾಳ ಗ್ರಾಮದ ಸತೀಶ್ ಶಿವಕುಮಾರ್ ಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್ ನಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಕಾರು ಬೈಕ್ ಗೆ ಗುದ್ದಿದ ವೇಗಕ್ಕೆ ಹತ್ತು ಅಡಿ ಎತ್ತರಕ್ಕೆ ಹಾರಿ ಬೈಕ್ ಸವಾರರು ಬಿದ್ದಿದ್ದಾರೆ. ಮನ್ನಾಖೇಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.