ಹೊಳಲ್ಕೆರೆ: ಹೊಳಲ್ಕೆರೆ ಕ್ಷೇತ್ರದ ಐತಿಹಾಸಿಕ ಭರಮಣ್ಣ ನಾಯಕ ನಿರ್ಮಿಸಿದ ದೊಡ್ಡ ಕೆರೆ ಕೋಡಿ ಬಿದ್ದು ಹರಿಯುತ್ತಿದೆ. ಇದರಿಂದ ಈ ಭಾಗದ ರೈತರು ಸಂತಸಗೊಂಡಿದ್ದಾರೆ. ನಿರಂತರ ಹಾಗೂ ರಾತ್ರಿ ಸುರಿದ ಮಳೆಯ ನೀರು ಕೆರೆಗೆ ಹರಿದು ಬಂದಿದೆ.ಭದ್ರಾ ಏತ ನೀರಾವರಿ ಯೊಜನೆಯ ನೀರು ಕೂಡ ಕೆರೆಗೆ ಹರಿದು ಬರುತ್ತಿದೆ. ಭರಮಸಾಗರ ಭಾಗದ ಜನರ ಜೀವನಾಡಿಯಾಗಿರುವ ದೊಡ್ಡ ಕೆರೆ ಒಂದು ಸಾವಿರಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಹೊಂದಿದ್ದು,
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ನೀರು ಕೆರೆಗೆ ಅಪಾರ ಪ್ರಮಾಣದಲ್ಲಿ ಹರಿದು ಬಂದಿದೆ. ಇದರ ಜೊತೆ ಏತ ನೀರಾವರಿ ಯೋಜನೆ ಅಡಿಯಲ್ಲಿ ಭದ್ರಾ ನೀರು ಬಂದು ಕೆರೆ ಒಡಲು ಸೇರುತ್ತಿದೆ.ಇದರಿಂದ ಕೆರೆ ತುಂಬಿ ಕೋಡಿ ಬಿದ್ದಿದೆ. ಬಿದ್ದು ಹರಿಯುತ್ತಿದ್ದು, ರೈತರ ಸಾವಿರಾರು ಎಕರೆಗೆ ಕೆರೆ ನೀರುಣಿಸಲಿದ್ದು, ಈ ಭಾಗದ ರೈತಾಪಿ ವರ್ಗ ಸಂಭ್ರಮದಲ್ಲಿದ್ದಾರೆ.