ವಿಜಯಪುರ:- ಮೀನು ಹಿಡಿಯಲು ಹೋದ ಮಕ್ಕಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ದ್ಯಾಬೇರಿ ಗ್ರಾಮದಲ್ಲಿ ಜರುಗಿದೆ.
Yatnal; ಗ್ಯಾರಂಟಿ ಸಂಪೂರ್ಣ ವಿಫಲ.. ಸಿದ್ದರಾಮಯ್ಯಗೆ ನೈತಿಕತೆ ಹಕ್ಕಿಲ್ಲ – ಯತ್ನಾಳ್ ..!
ಹೆಸ್ಕಾಂ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಇಬ್ಬರು ಬಾಲಕರ ದುರ್ಮರಣ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್ ತಂತಿ ಕಟ್ ಆಗಿ ನೀರಿನಲ್ಲಿ ಬಿದ್ದ ಹಿನ್ನೆಲೆ ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ರೋಹಿತ್ ಅನೀಲ್ ಚವ್ಹಾಣ್ ೮, ವಿಜಯ ಪಿಂಟು ಚವ್ಹಾಣ್ ೧೬ ಸಾವನಪ್ಪಿದ ಬಾಲಕರು ಎನ್ನಲಾಗಿದೆ. ಇಬ್ಬರು ಬಾಲಕರ ಮೃತ ದೇಹ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕರ ಮೃತ ದೇಹ ತಬ್ಬಿಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ವಿಜಯಪೂರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.