ಬೆಂಗಳೂರು:- ತಂಪು ಪಾನೀಯ ಕುಡಿದು ಮಗು ಅಸ್ವಸ್ಥಗೊಂಡ ಘಟನೆ ರಾಜಧಾನಿ ಬೆಂಗಳೂರಿನ ಶ್ರೀರಾಂಪುರದಲ್ಲಿ ಜರುಗಿದೆ.
ಮೇ 31ರವರೆಗೆ ರಾಜ್ಯದ ವಿವಿಧಡೆಯಿಂದ ಬೆಂಗಳೂರಿಗೆ ಬರುವ ಕೆಲವು ರೈಲು ರದ್ದು!
ಪೋಷಕರು ಪ್ಯಾಕೆಟ್ ಪರಿಶೀಲಿಸಿದ್ದು ತಂಪು ಪಾನೀಯದ ಪ್ಯಾಕೆಟ್ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತುವೊಂದು ಸಿಕ್ಕಿದೆ. ಘಟನೆ ಸಂಬಂಧದ ವಿಡಿಯೋ ವೈರಲ್ ಆಗಿದೆ.
ಪ್ಯಾಕೆಟ್ನಲ್ಲಿ ಸಿಕ್ಕ ಕಪ್ಪು ಬಣ್ಣದ ಮಿಶ್ರಣದಿಂದಲೇ ಮಗು ಅಸ್ವಸ್ಥವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗು ಚೇತರಿಸಿಕೊಂಡಿದೆ. ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ