ಸರ್ಕಾರಿ ಕೆಲಸ ದೇವರ ಕೆಲಸ ಅಂತಾ ಬೊಬ್ಬೆ ಹೊಡಿದು, ಹರಾಮಿ ಸಂಬಳದ ಜೊತೆಗೆ ಗಿಂಬಳ ಪಡೆದು ಹಾಡುಗಲೇ ಕೆಲಸ ಮಾಡದೇ ಹಾಸಿಗೆ ಹಾಸಿಕೊಂಡು ಮಲಗಿಕೊಂಡ ಪ್ರಸಂಗ ನಡೆದಿದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ನಡೆದ ಘಟನೆ ಇದು, ಆಸ್ಪತ್ರೆ ಮುಂಭಾಗದಲ್ಲೇ ಗ್ರಾಮ ಪಂಚಾಯತಿ ಇದ್ದು ಯಾವಾಗಲು ಜನಬಿಡು ಪ್ರದೇಶವಾಗಿರುತ್ತದೆ ಆದ್ರೂ ನಮಗೆ ಯಾರ ಬಯವು ಇಲ್ಲಾ ಎಂಬಂತೆ ನಿದ್ರೆಗೆ ಜಾರಿದ್ದಾರೆ.
ಪಶು ವೈದ್ಯಧಿಕಾರಿ ಹಣಮಂತ ನಾವಿ ಫೀಲ್ಡ್ ವರ್ಕ್ ಹೋಗಿದ್ರಂತೆ ಅದಕ್ಕಾಗಿ ಸಿಬ್ಬಂದಿ ತುಕಾರಾಮ ಮಂಟೂರ ಹಾಗೂ ಇನ್ನೊರ್ವ ಸಿಬ್ಬಂದಿ ಕೆಲಸ ಮಾಡದೇ ಹಾಸಿಗೆ ಹಿಡಿದ್ದಿದ್ದಾರೆ ಗ್ರಾಮೀಣ ಪ್ರದೇಶದ ಜನರ ಬದುಕಿನ ಮೂಲ ಕಸುಬಾದ ಹೈನುಗಾರಿಕೆಗೆ ನೇರವಾಗಲೆಂದು ಸರ್ಕಾರ ಅನೇಕ ಯೋಜನೆಗಳನ್ನು ತಂದ್ರು ಇಂತಹ ಗ್ರಾಮೀಣ ಭಾಗಕ್ಕೆ ಅದು ಇಂತಹ ಅಧಿಕಾರಿಗಳಿಂದ ಮರೀಚಿಕೆಯಾಗಿದೆ
![Demo](https://ainlivenews.com/wp-content/uploads/2023/12/spoorthi-1.jpg)
ಮುಖ್ಯ ವೈದ್ಯಧಿಕಾರಿ ನಾವಿ ಯವರನ್ನು ಅನೇಕ ಸಾರಿ ನಡೆದಿರುವ ಘಟನೆಯ ಮಾಹಿತಿ ಕೇಳಲು ಕರೆ ಮಾಡಿದ್ರು ಕರೆ ಸ್ವೀಕರಿಸೋದಿಲ್ಲ, ಮುಖ್ಯ ವೈದ್ಯರ ಕುಮ್ಮಕ್ಕು ಇದೆಯಾ ಅನ್ನೋ ಅನುಮಾನಗಳು ಕೂಡ ದಿಟವಾಗಿವೆ, ಏನೇಯಾಗಲಿ ಇಂತಹ ಸಿಬ್ಬಂದಿಗಳಿಂದ ಯಾವ ಸುಧಾರಣೆ ನಮ್ಮ ಸಮಾಜ ಬಯಸೋಕ್ಕಗುತ್ತೆ…?
ವರದಿ : ಎಂ ಕೆ. ಸಪ್ತಸಾಗರ
![](https://ainlivenews.com/wp-content/uploads/2024/01/Ad-Banner-copy-scaled.jpg)