ಗದಗ:- ತಾಲೂಕಿನ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಜಾತ್ರೆ ಹಿನ್ನೆಲೆ ಶರಣರ ಬುತ್ತಿ ಕಟ್ಟಿಕೊಂಡು ಮಹಿಳೆಯರು ಹೊರಟಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಮೇಲ್ಮಠ ಗ್ರಾಮದ ಗ್ರಾಮಸ್ಥರು, ಶರಣರ ಬುತ್ತಿಯಲ್ಲಿ ಖಡಕ್ ಜೋಳದ ರೊಟ್ಟಿ, ಪಲ್ಯ, ಕರ್ಚಿಕಾಯಿ, ಶೇಂಗಾ ಹೋಳಿಗೆ ವಿವಿಧ ತೆರನಾದ ಖಾದ್ಯ ಮಾಡಿಕೊಂಡು ಹೊರಟಿರುವುದು ವಿಶೇಷವಾಗಿತ್ತು. ಗ್ರಾಮದಲ್ಲಿ ಮನೆ ಮೆನೆಯಿಂದ ಶರಣರ ಬುತ್ತಿ ತಯಾರಿ ಮಾಡಲಾಗಿದ್ದು, ಗ್ರಾಮದಲ್ಲಿ ವಾದ್ಯಮೇಳಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆದಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಸುಮಾರು 200ಕ್ಕೂ ಹೆಚ್ಚು ಮಹಿಳೆಯರಿಂದ ಬುತ್ತಿಯಾತ್ರೆ ನಡೆದಿದ್ದು, ಗ್ರಾಮಸ್ಥರು ಸಹ ಶರಣರ ಬುತ್ತಿಯಾತ್ರೆಗೆ ಸಾಥ್ ನೀಡಿದ್ದಾರೆ
![](https://ainlivenews.com/wp-content/uploads/2024/01/Ad-Banner-copy-scaled.jpg)