ಚಾಮರಾಜನಗರ:- ತುಂಡಾದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ರೈತರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಈ ಮನೆ ಮದ್ದು ಟ್ರೈ ಮಾಡಿ!
ಚಾಮರಾಜನಗರ ಜಿಲ್ಲೆಯ ಅಯ್ಯನಪುರ ಗ್ರಾಮದ ರೈತರಾದ 48 ವರ್ಷ ವಯಸ್ಸಿನ ನಾಗೇಂದ್ರ ಹಾಗೂ 40 ವರ್ಷ ವಯಸ್ಸಿನ ಮಲ್ಲೇಶ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ನಾಗೇಂದ್ರ ಹಾಗೂ ಮಲ್ಲೇಶ್ ಇಬ್ಬರು ರೈತರು ನಿನ್ನೆ ರಾತ್ರಿ ಜಮೀನಿಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರೂ ರೈತರೂ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ರೈತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಮಳೆ ಅವಾಂತರ: ಕಳೆದ ಒಂದು ವಾರದಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ವಿದ್ಯುತ್ ಅವಘಡಗಳು ನಿರಂತರವಾಗಿ ನಡೆಯುತ್ತಿದೆ. ಕಳೆದ ವಾರವಷ್ಟೆ ಬಸವನಪುರ ಗ್ರಾಮದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಗೆ ಸಿಲುಕಿ ರೈತ ಮಾದಪ್ಪ ಅಸುನೀಗಿದ್ರು.
ನಿನ್ನೆ ಬುಧವಾರ ಬಾಗಳಿ ಗ್ರಾಮದಲ್ಲಿ ಯುವ ರೈತನೋರ್ವ ವಿದ್ಯುತ ತಂತಿ ತಗುಲಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ನಿನ್ನೆ ರಾತ್ರಿ ಅಯ್ಯನಪುರ ಗ್ರಾಮದಲ್ಲಿ ಇಬ್ಬರು ರೈತರು ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿರುವುದು ಆತಂಕ್ಕೆ ಕಾರಣವಾಗಿದೆ. ಸೆಸ್ಕಾಂ ನಿರ್ಲಕ್ಚ್ಯವೇ ಅಮಾಯಕ ರೈತರ ಸಾವಿಗೆ ಕಾರಣವಾಗಿದೆ ಎಂದು ಇದೀಗ ಸೆಸ್ಜಾಂ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.