ಚಾಮರಾಜನಗರ:– ಕಲುಷಿತ ನೀರು ಕುಡಿದು15 ಜನರು ಅಸ್ವಸ್ಥರಾದ ಮಧುವಿನಹಳ್ಳಿ ಗ್ರಾಮಕ್ಕೆ ಇಂದು ಚಾಮರಾಜನಗರ ಜಿಲ್ಲಾಧಿಕಾರಿ ಟಿ.ಶಿಲ್ಪಾನಾಗ್ ರವರು ಭೇಟಿ ನೀಡಿ ಅನಾರೋಗ್ಯಕ್ಕೆ ಒಳಗಾದ ಗ್ರಾಮಸ್ಥರ ಅರೋಗ್ಯ ವಿಚಾರಿಸಿದರು.
Bagalakote: ಗಟ್ಟಿ ಧ್ವನಿಯಾಗಿದ್ದ ಮಹಿಳಾ ಹೋರಾಟಗಾರ್ತಿ ರೈತರ ಜಯಶ್ರೀ ಗುರಣ್ಣನವರ ಅವರಿಗೆ ಶ್ರದ್ಧಾಂಜಲಿ
ಚಾಮರಾಜನಗರ ಜಿಲ್ಲೆಯ ಕೊಳ್ಲೇಗಾಲ ತಾಲೂಕಿನ ಮಧುವಿನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಕೆಲವರು ಅಸ್ವಸ್ಥಕೊಂಡಿದ್ರು. ಈ ಹಿನ್ನಲೆಯಲ್ಲಿ ಭಾನುವಾರ ಮದ್ಯಾಹ್ನ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಸಿಬ್ಬಂಧಿಗಳ ಜೊತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಧುವಿನಹಳ್ಲಿ ಗ್ರಾಮಕ್ಕೆ ಭೇಟಿ ನಂತೆ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು ಮಧುವಿನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಜನರು ಅಸ್ವಸ್ಥರಾಗಿ ಹಲವರು ಸರ್ಕಾರಿ ಆಸ್ಪತ್ರೆಗೆ ಹಾಗೂ ಕೆಲವರು ಸ್ಥಳೀಯ ಅಸ್ಪತ್ರೆಗೆ ದಾಖಲಾಗಿ ಬಹುತೇಕರು ಡಿಸ್ಚಾಜ್೯ ಆಗಿದ್ದಾರೆ ಎಂದರು.
ಗ್ರಾಮದಲ್ಲಿ ಎರಡು ಬೋರ್ ವೆಲ್ಗಳು ಇದ್ದು ಉಪ್ಪಿನ ಅಂಶ ಇರುವ ಕಾರಣ ಮತ್ತು ಸತತ ಮಳೆಯ ಕಾರಣರಿಂದ ಕುಡಿಯಲು ಆ ಎರಡೂ ಬೋರ್ವವೆಲ್ಗಲಲ್ಲಿನ ನೀರು ಕಲುಷತಗೊಂಡು ಕುಡಿಯಲು ಯೋಗ್ಯವಾಗಿರುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಜಿಲ್ಲಾಡಳಿತದಿಂದ ಟ್ಯಾಂಕರ್ ಮೂಲಕ ಜನರಿಗೆ ಕುಡಿಯಲು ನೀರನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಟೌನ್ ಶಿಪ್ ರಸ್ತೆ ಅಭಿವೃದ್ದಿ ಕಾಮಗಾರಿ ವೇಳೆ ನೀರಿನ ಪೈಪ್ ಲೈನಿಗೆ ತೊಡಕಾಗಿದೆ.
ಈ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಲಾಗಿದೆ. ಅಲ್ಲದೆ ಕಳೆದ ಆರೆಂಟು ತಿಂಗಳಿಂದ ಗ್ರಾಮಪಂಚಾಯ್ತಿ ಪಿಡಿಓ ತಾ.ಪಂ.ಇಓ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸತತವಾಗಿ ಸಭೆ ನಡೆಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸುವನಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
ಈ ರೀತಿಯ ಅನಾರೋಗ್ಯಕ್ಕೆ ಒಳಗಾದರೆ ಜನರು ಭಯಪಡಬೇಡಿ ಕೂಡಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಸಲಹೆ ಹಾಗು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.