ಚಾಮರಾಜನಗರ:- ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಬಣ್ಣಾರಿ ರಸ್ತೆಯ ದಿಂಬಂ ಘಾಟ್ ನ ರಸ್ತೆಯ ತಡೆಗೋಡೆ ಮೇಲೆ ಜೋಡಿ ಚಿರತೆಗಳು ವಿಶ್ರಮಿಸುತ್ತಿದ್ದ ದೃಶ್ಯ ಕಾರಿನಲ್ಲಿ ತೆರಳುತ್ತಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ಸಖತ್ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ರಸ್ತೆಯ ತಡೆಗೋಡೆ ಮೇಲೆ ಜೋಡಿ ಚಿರತೆಗಳು ವಿಶ್ರಮಿಸುತ್ತ ಕುಳಿತಿದ್ದ ದೃಶ್ಯವನ್ನ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದವರು ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಈ ವೇಳೆ ಎರಡೂ ಚಿರತೆಗಳು ಗರ್ಜಿಸುತ್ತಾ ರಸ್ತೆ ಪಕ್ಕದಲ್ಲಿ ಕುಳಿತದನ್ನು ಕಂಡು ಪ್ರಯಾಣಿಕರು ಒಂದು ಕ್ಷಣ ಗಾಬರಿಗೊಂಡಿದ್ದಾರೆ.
ಆದರೂ ಧೈರ್ಯದಿಂದಲೇ ಸಮೀಪದಲ್ಲಿದ್ದ ಚಿರತೆಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿದ್ದಾರೆ.
ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಕೆಲವೊಮ್ಮೆ ಬಹಿರ್ದೆಸೆವೆ ತೆರಳಿ ಚಿರತೆ ದಾಳಿಗೆ ಒಳಗಾಗಿ ಮೃತ ಪಟ್ಟಿರುವ ಘಟನೆಗಳು ಈ ಹಿಂದೆ ನಡೆದಿತ್ತು.
ಹಾಗಾಗಿ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಜಾಗರೂಕರಾಗಿ ಚಲಿಸಿ ಎಂದು ಅರಣ್ಯ ಇಲಾಖೆ ಎಚ್ಚರಿಸಿದ್ದಾರೆ.