ಚಾಮರಾಜನಗರ:– ಹಸಿದ ಹೆಬ್ಬುಲಿಗೆ ನಾಯಿಮರಿ ಆಹಾರವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಜರುಗಿದೆ.
ಹಣಕಾಸಿನ ವಿಚಾರದಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ..!
ಹುಬ್ಬುಲಿಗೆ ಭಾರೀ ಗಾತ್ರದ ಕಡವೆ ಕಾಡೆಮ್ಮೆತಂತಹ ಪ್ರಾಣಿಗಳೇ ಸಾಮಾನ್ಯವಾದ ಆಹಾರ. ಆದರೆ ಬೀದಿ ನಾಯಿಯನ್ನ ಭೇಟೆಯಾಡಿದ ಹುಲಿ ಅಭಯಾರಣ್ಯದೊಳಕ್ಕೆ ಎಳೆದೊಯ್ಯುತ್ತಿರುವ ದೃಶ್ಯ ಇದೀಗ ಬಂಡೀಪುರದಲ್ಲಿ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ನಡೆಸ ಘಟನೆ ಇದಾಗಿದೆ. ಸಪಾರಿಗೆ ತೆರಳಿದ್ದ ಪ್ರವಾಸಿಗರು ಸನಿಹದಲ್ಲೇ ಬೇಟೆ ದೃಶ್ಯವನ್ನ ನೋಡಿ ಪುಳಕಿತರಾಗಿದ್ದಾರೆ. ಆದರೆ ಬೀದಿ ನಾಯಿ ಕಾಡಿನೊಳಗೆ ಪ್ರವೇಶಿಸಿದ್ದಾದರು ಹೇಗೆ ಎಂದು ಪ್ರತ್ಯಕ್ಷದರ್ಶಿಗಳು ಆಶ್ಚರ್ಯಚಕಿತರಾಗಿದ್ದಾರೆ.
ಗುರುವಾರ ಸಂಜೆ ಸಫಾರಿಗೆ ತೆರಳಿದ್ದವರಿಗೆ ಈ ದ್ರಶ್ಯ ಕಾಣಸಿಕ್ಕಿದೆ. ಹುಲಿಯು ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯವನ್ನ ಸಪಾರಿಗೆ ತೆರಳಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ್ದರಾರೆ. ಸೂಕ್ಷ್ಮವಾಗಿ ಗಮನಿಸಿದ ಬಳಿಕ ಅದು ಬೀದಿ ನಾಯಿ ಎಂದು ಖಾತರಿಯಾಗಿದೆ. ಆದರೆ ಕಾಡಿನ ಒಳಗೆ ಬೀದಿ ನಾಯಿ ಪ್ರವೇಶಿಸಿದ್ದಾದರು ಹೇಗೆ ಎಂದು ಆಶ್ಚರ್ಯಗೊಂಡಿದ್ದಾರೆ. ಕಾಡಂಚಿನ ಗ್ರಾಮದ ನಾಯಿಗಳು ಒಮ್ಮೊಮ್ಮೆ ಆಹಾರವನ್ನರಸಿ ಕಾಡಿನೊಳಗೂ ಪ್ರವೇಶ ಮಾಡುತ್ತವೆ ಎಂದು ಅರಣ್ಯ ಇಲಾಖೆ ಸಿಬ್ಬಂಧಿಗಳು ತಿಳಿಸಿದ್ದಾರೆ.