ಬೆಂಗಳೂರು: ಮೇಲ್ಮನೆಯ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಕಿತ್ತಾಟ ಶುರುವಾಗಿದೆ.. ಒಕ್ಕಲಿಗ, ಕುರುಬ, ಎಸ್ಸಿಎಸ್ಟಿ ಸೇರಿದಂತೆ ಎಲ್ಲಾ ಸಮುದಾಯಗಳಲ್ಲೂ ಇಬ್ಬರು ಮೂವರು ಆಕಾಂಕ್ಷಿಗಳಿದ್ದು, ತೀವ್ರ ಪೈಪೋಟಿ ನಡೀತಿದೆ.. ಸಿಎಂ ಪುತ್ರನಿಗೆ ಪರಿಷತ್ ಟಿಕೆಟ್ ಬಹುತೇಕ ಕನ್ಫರ್ಮ್ ಆಗಿದೆ.ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆಗೆ ಪಕ್ಷದಲ್ಲಿ ಅಸಮಧಾನ ಭುಗಿಲೇಳ್ತಿದೆ. ಯೆಸ್, ಜೂನ್ 13 ರಂದು ವಿಧಾನ ಪರಿಷತ್ ನ 11 ಸ್ಥಾನಗಳಿಗೆ ಎಲೆಕ್ಷನ್ ಫಿಕ್ಸ್ ಆಗ್ತಿದ್ದಂತೆ, ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೀತಿದೆ.
ನಿನ್ನೆ, ಮೊನ್ನೆವರೆಗೂ ಎರಡು ಡಜನ್ ಇದ್ದ ಆಕಾಂಕ್ಷಿಗಳು ಈಗ 64 ಮಂದಿ ಆಕಾಂಕ್ಷಿಗಳಾಗಿದ್ದಾರೆ.. ಕುರುಬ ಕೋಟಾದಲ್ಲಿ ಸಿಎಂ ಪುತ್ರ ಯತೀಂದ್ರಗೆ ಪರಿಷತ್ ಟಿಕೆಟ್ ಬುಹುತೇಕ ಫಿಕ್ಸ್ ಆಗಿದೆ.ಸಿದ್ದರಾಮಯ್ಯನವ್ರಿಗೆ ಕ್ಷೇತ್ರ ಬಿಟ್ಟು ಕೊಟ್ಟಾಗಲೇ ಯತೀಂದ್ರ ಅವ್ರನ್ನ ಎಂಎಲ್ ಸಿ ಮಾಡೋದಾಗಿ ಭರವಸೆ ನೀಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಗೆಲ್ಲಲಿರುವ ಏಳು ಸ್ಥಾನಗಳ ಪೈಕಿ ಒಂದು ಪರಿಷತ್ ಸ್ಥಾನ ಯತೀಂದ್ರಗೆ ಫಿಕ್ಸ್ ಆಗಿದೆ. ಯತೀಂದ್ರರನ್ನ ಎಂಎಲ್ ಸಿ ಮಾಡೋ ಬಗ್ಗೆ ಸಿಎಂ ಕೂಡ ಮಾತಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಹೆಚ್ ಎಂ ರೇವಣ್ಣಗೆ ಪರಿಷತ್ ಟಿಕೆಟ್ ಸಿಗೋದು ಡೌಟಾಗಿದೆ. ಪರಿಷತ್ ಪ್ರವೇಶಿಸಲು ಸಿಎಂ, ಡಿಸಿಎಂ ಅವ್ರನ್ನ ಆಗಾಗ ಭೇಟಿ ಮಾಡಿ ಭಾರೀ ಲಾಬಿ ನಡೆಸ್ತಾ ಇದ್ದಾರೆ.ಈ ಕಡೆ ರೇಸ್ ನಲ್ಲಿರುವ ಹಿರಿಯ ನಾಯಕರಾದ ಎನ್ ಎಸ್ ಬೋಸರಾಜು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದರಾಜುಗೆ ಟಿಕೆಟ್ ನೀಡಬಾರದು ಅಂತಾ ಪಕ್ಷ ನಿಷ್ಠರು ಆಗ್ರಹ ಮಾಡ್ತಿದ್ದಾರೆ.
ಪಕ್ಷಕ್ಕೆ ಕೊಡುಗೆಯೇ ನೀಡದವ್ರಿಗೆ ಟಿಕೆಟ್ ಕೊಡಬಾರದು ಅಂತಾ ಪಕ್ಷನಿಷ್ಠರು ಹೈಕಮಾಂಡ್ ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ.ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸದ ಕಡೆ ಬೆಳಿಗ್ಗೆಯಾದ್ರೆ ಸಾಕು, ಆಕಾಂಕ್ಷಿಗಳ ದಂಡೇ ಹೋಗ್ತಿದೆ. ಇಂದೂ ಕೂಡ ಪಿ.ಟಿ ಪರಮೇಶ್ವರ ನಾಯ್ಕ್, ನಾರಾಯಣಸ್ವಾಮಿ, ಮಾಜಿ ಶಾಸಕ ಪ್ರಸನ್ನ ಕುಮಾರ್ ಸೇರಿದಂತೆ ಹಲವು ನಾಯಕರು ಡಿಕೆಶಿ ಬೇಟಿ ಮಾಡಿ, ಲಾಬಿ ನಡೆಸಿದ್ರು..
ವಿಧಾನಸಭೆ ಎಲೆಕ್ಷನ್ ನಲ್ಲಿ ಸೋತವರು, ಲೋಕಸಭೆ ಟಿಕೆಟ್ ವಂಚಿತರು ಸೇರಿದಂತೆ ಹಲವಾರು ಮುಖಂಡರು ಎಂಎಲ್ ಸಿ ಟಿಕೆಟ್ ಗಾಗಿ ಅರ್ಜಿ ಹಾಕಿಕೊಂಡಿದ್ದಾರೆ.ವಿ.ಎಸ್ ಉಗ್ರಪ್ಪ, ವೀಣಾ ಕಾಶಪ್ಪನವರ್, ಬಿ ಎಲ್ ಶಂಕರ್, ವಿ. ಆರ್ ಸುದರ್ಶನ್, ಡಿ.ಆರ್ ಪಾಟೀಲ್, ಕೆ.ಆರ್ ರಮೇಶ್, ವಿನಯ್ ಕಾರ್ತಿಕ್, ವಿಜಯ್ ಮುಳಗುಂದ್, ಕುಸುಮಾ, ರಾಮಚಂದ್ರಪ್ಪ,
ಕೆಂಚೇಗೌಡ, ಬಿ.ಆರ್ ನಾಯ್ಡು, ಭರ್ತಲೋಮ, ಭವ್ಯ ನರಸಿಂಹಮೂರ್ತಿ, ಆರತಿ ಕೃಷ್ಣ, ತೇಜಸ್ವಿನಿಗೌಡ, ಕೆ.ಪಿ ನಂಜುಂಡಿ, ನಟರಾಜಗೌಡ ಸೇರಿದಂತೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಗಾಗಿ ಭಾರೀ ಲಾಬಿ ನಡೆಸ್ತಾ ಇದ್ದಾರೆ.ಇನ್ನೆರಡು ಮೂರು ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದು, ಆಗ ಎಂಎಲ್ ಸಿ ಟಿಕೆಟ್ ಲಿಸ್ಟ್ ಬಹುತೇಕ ಫೈನಲ್ ಆಗೋ ಸಾಧ್ಯತೆ ಇದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)