ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ ಗೆ ಸಂಬಂದಿಸಿದಂತೆ, ಇಂದು ಗಣಿನಾಡು ಬಳ್ಳಾರಿಯಲ್ಲಿ ಮತ್ತೋರ್ವ ಶಂಕಿತ ಭಯೋತ್ಪದಕನನ್ನು ಎನ್ ಐ ಎ ಅವರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕೊಂಡ್ಯುದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಈ ಕುರಿತು ಒಂದು ಸ್ಟೋರಿ ನೋಡೋಣ ಬನ್ನಿ……
ಇಡೀ ರಾಜ್ಯವನ್ನೆ ಬೆಚ್ಚಿಬಿಳಿಸಿದ್ದ ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸುವ ಕಾರ್ಯ ಎನ್ ಐ ಎ ತಂಡದಿಂದ ನಡೆದಿದೆ. ಈ ಕೃತ್ಯ ವೇಸಗಿದ ಆರೋಪಿಯನ್ನು ಬಂಧಿಸುವ ಕಾರ್ಯಕ್ಕೆ ಈಗಾಗಲೇ ರಾಜ್ಯದಾದ್ಯಂತ ಶೋಧ ಕಾರ್ಯ ಕೈಗೊಂಡರು ಇನ್ನು ಶಂಕಿತ ಉಗ್ರನ ಬಂಧನವಾಗಿಲ್ಲ. ಶಂಕಿತ ಉಗ್ರ ಬಳ್ಳಾರಿಗೆ ಬಂದ ನಂತರ ಬಳ್ಳಾರಿಯ ಟ್ಯಾಂಕ್ ಬಂಡ್ ಏರಿಯಾದ ನಿವಾಸಿ ಶಬ್ಬೀರ್ ನನ್ನು ಬುಡಾ ಕಾಂಪ್ಲೇಕ್ಸ್ ಬಳಿ ಭೇಟಿಯಾಗಿರುವುದು ಧೃಡ ಪಟ್ಟಿದೆ. ಈ ಕಾರಣದಿಂದಾಗಿ ಎನ್ ಐಎ ತಂಡದವರು ಇಂದು ಮುಂಜಾನೇ ಶಬ್ಬಿರ್ ನನ್ನು ಬಂಧಿಸಿ ಬೆಂಗಳೂರುಗೆ ಕರೆದ್ಯೊದಿದ್ದಾರೆ.
ಬಳ್ಳಾರಿಯಲ್ಲಿ ವಿಚಾರಣೆ ಬಳಿಕ ಇದೀಗ ಕಲಬುರಗಿಯತ್ತ ಎನ್ಐಎ ತಂಡ ತೆರಳಿದೆ. ಶಂಕಿತ ಉಗ್ರ ಬಳ್ಳಾರಿಯಿಂದ ಕಲಬುರಗಿ ಬಸ್ ಹತ್ತಿರೋ ಸಿಸಿ ಟಿವಿ ವಿಶುವಲ್ಸ್ ಎನ್ಐಎ ತಂಡಕ್ಕೆ ಸಿಕ್ಕಿದೆ. ಅದ್ದರಿಂದ ಮೂರು ಪ್ರತ್ಯೇಕ ತಂಡವಾಗಿ ಕಲಬುರಗಿಗೆ ಪ್ರಯಾಣಿಸಿರೋ ಎನ್ಐಎ ತಂಡ.ಆದೋನಿ ಮಂತ್ರಾಲಯ ರಾಯಚೂರು ಮಾರ್ಗದಲ್ಲಿ ಒಂದು ತಂಡ. ಸಿಂಧನೂರು, ಸಿರಗುಪ್ಪ, ಶಹಾಪುರ, ಸುರಪುರ ಮಾರ್ಗದಲ್ಲಿ ಒಂದು ತಂಡ. ಮತ್ತೊಂದು ತಂಡ ಗ್ರಾಮೀಣ ( ಹಳ್ಳಿ ಮಾರ್ಗ) ಭಾಗದ ಮೂಲಕ ತೆರಳಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟಿಂಗ್ ಗೆ ಗಣಿನಾಡು ಬಳ್ಳಾರಿಗೆ ಲಿಂಕ್ ಇರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ಬಳ್ಳಾರಿ ಸಹ ಉಗ್ರರ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರು, ಧಾರ್ಮಿಕ ಸಹಿಷ್ಣತೆಯ ಕೊರತೆಯಿಂದಾಗಿ ಈ ರೀತಿಯ ಕೃತ್ಯಕ್ಕೆ ಕೈ ಹಾಕುವುದು ಸರಿಯಾದ ಬೆಳವಣಿಗೆ ಅಲ್ಲ.